ಮಂಗಳೂರು: ಕರ್ನಾಟಕ ರಾಜ್ಯ ಉಲಮಾ ಒಕ್ಕೂಟದ ಕಾರ್ಯದರ್ಶಿಯಾಗಿರುವ ನೂರಾರು ಶಿಷ್ಯವೃಂದವನ್ನು ಹೊಂದಿರುವ ಮೌಲಾನಾ ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿಯವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ನಿಲುವುಗಳನ್ನು ವೈಯಕ್ತಿಕ ಅಭಿಪ್ರಾಯವಾಗಿ ಪ್ರಶ್ನಿಸಿದ್ದರು.
ದೇಶಾದ್ಯಂತ ಕಾಂಗ್ರೆಸ್ ತನ್ನ ಜಾತ್ಯಾತೀತ ನಿಲುವುಗಳಲ್ಲಿ ಇತ್ತೀಚೆಗೆ ವ್ಯತಿರಿಕ್ತ ರೀತಿಯ ಹೆಜ್ಜೆಗಳನ್ನು ಇರಿಸುವ ಮೂಲಕ ಹಲವಾರು ಜನರಲ್ಲಿ ನೋವಿನ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಹಲವಾರು ಪ್ರಗತಿಪರರು, ಧಾರ್ಮಿಕ ನಾಯಕರು ಇದನ್ನು ಪ್ರಶ್ನಿಸಿದ್ದು ರಾಷ್ಟ್ರ ಮಟ್ಟದಲ್ಲೂ ವಾರ್ತೆಯಾದ ವಿಚಾರವಾಗಿದೆ.
ಇದೇ ಸಂದರ್ಭ ದ.ಕ ಜಿಲ್ಲೆಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಎಂಬ ವ್ಯಕ್ತಿ ತೋಕೆ ಕಾಮಿಲ್ ಸಖಾಪಿಯವರಿಗೆ ಬೆದರಿಕೆಯ ರೀತಿ ವೈಯಕ್ತಿಕ ಅವಹೇಳನ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು.
ಟ್ವೀಟಿಗರು ಈ ವಿಚಾರವನ್ನು ಕೆದಕಿದ್ದು, #ResighnDKcongressSevadalPresident ಎಂಬ ಹ್ಯಾಷ್ ಟ್ಯಾಗ್ ಮೂಲಕ ಸೇವಾದಳ ಅಧ್ಯಕ್ಷನ ಬೆಂಡೆತ್ತಿದ್ದು, ಸಾವಿರಾರು ಟ್ವೀಟ್ ಗಳು ಮುಖಂಡನ ರಾಜಿನಾಮೆ ಪಡೆಯುವಂತೆ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದೆ.
ಜೊತೆಗೆ ಹ್ಯಾಷ್ ಟ್ಯಾಗ್ ಕೂಡ ರಾಜಿನಾಮೆ ಪದವನ್ನು ತಪ್ಪಾಗಿ ಬರೆದು, ಅವನ್ನು ಅರ್ಥೈಸುವ ಸಾಮರ್ಥ್ಯ ಸೇವಾದಳಕ್ಕಿಲ್ಲ ಎಂಬಂತ ಟ್ವೀಟ್ ಗಳು ರವಾನಿಸಿ ಟ್ರೋಲ್ ಮಾಡುವ ರೀತಿ ಎಲ್ಲಾ ಟ್ವೀಟಿಗರು ಬಳಸಿದ್ದು ಕಂಡುಬಂತು.
ಜಿಲ್ಲೆಯಲ್ಲಿ ಭಾರೀ ರಾಜಕೀಯ ಚರ್ಚೆಗಳು ಪ್ರಾರಂಭವಾಗಿದ್ದು,ಪ್ರಸ್ತುತ ಆಂದೋಲನ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ ಎಂಬ ವಿಚಾರ ವ್ಯಾಪಕವಾಗಿ ಕೇಳಿ ಬರುತ್ತಿದೆ. ಒಬ್ಬ ಮುಖಂಡನ ಬೇಜವಾಬ್ದಾರಿತನದ ವರ್ತನೆಗೆ ಪಕ್ಷ ಜವಾಬ್ದಾರಿಯಲ್ಲ ಎಂಬ ಸಮರ್ಥನೆಯು ಜಿಲ್ಲಾ ಕಾಂಗ್ರೆಸ್ ನ ಅಧಿಕೃತ ವಕ್ತಾರರಲ್ಲಿ ಹಲವರು ಸಮಜಾಯಿಷಿ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್