janadhvani

Kannada Online News Paper

ಸ್ವಚ್ಚತಾ ಕಾರ್ಯಕ್ರಮ ಮೂಲಕ ಸ್ವಾತಂತ್ರ್ಯ ದಿನಾಚರಣೆ

ನೆಕ್ಕಿಲು: ಭವ್ಯ ಭಾರತದ 74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಧ್ವಜಾರೋಹಣ ದೊಂದಿಗೆ ಚಾಲನೆ ನೀಡಿ, ಬಳಿಕ ನೆಕ್ಕಿಲು – ಕುಪ್ಪೆಟ್ಟಿ ಮುಖ್ಯ ರಸ್ತೆಯುದ್ದಕ್ಕೂ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಹಾಗೂ ಸುನ್ನೀ ಯುವಜನ ಸಂಘ (SYS) ನ ನೆಕ್ಕಿಲು ಶಾಖಾ ಕಾರ್ಯಕರ್ತರು, ಎಲ್ಲರಿಗೂ ಮಾದರಿಯಾಗುವ ರೂಪದಲ್ಲಿ ಆಚರಿಸಿದರು.

ರಸ್ತೆಗಳ ಇಕ್ಕೆಲಗಳಲ್ಲಿ ತುಂಬಿದ್ದ ಹುಲ್ಲು ಗಿಡಗಳನ್ನು ತೆಗೆಯುವುದರೊಂದಿಗೆ, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯನ್ನು ಮಾಡಲಾಯಿತು. ಈ ಸ್ವಚ್ಚತಾ ಕಾರ್ಯಕ್ರಮವನ್ನು ಸರ್ವ ಧರ್ಮೀಯರು ಕೊಂಡಾಡಿ, ಆಶಿರ್ವದಿಸಿದರು. ಬೆಳಿಗ್ಗೆಯಿಂದ ಆರಂಭವಾದ ಸ್ವಚ್ಚತಾ ಕಾರ್ಯಕ್ರಮವನ್ನು ಸಂಜೆಯವರೆಗೂ ನಡೆಸಲಾಯಿತು.

SYS ಬ್ರಾಂಚ್ ಅಧ್ಯಕ್ಷರಾದ ಆದಂ ಮಾವಿನಗುಳಿ, ನಾಯಕರಾದ ಕೆ.ಪಿ ರಮ್ಲಾನ್ ಹಾಜಿ, ಬಶೀರ್, ಕಾಸಿಂ, ಅಬೂಬಕರ್, ಬಶೀರ್ ಮುಸ್ಲಿಯಾರ್, ನಝೀರ್, ಇಸಾಬ ಕಾರ್ಯದರ್ಶಿ NM ಶರೀಫ್ ಸಖಾಫಿ ಮತ್ತು SSF ಶಾಖಾಧ್ಯಕ್ಷ ಅಬ್ದುಲ್ ಮಜೀದ್, ನಾಯಕರಾದ ಅಶ್ರಫ್ ಮದನಿ,ಹಂಝ ಮದನಿ, ಹಾರಿಸ್, ನೌಶಾದ್,ಬಾತಿಶ್ ಮುಸ್ಲಿಯಾರ್, ಸಫ್ವಾನ್ ಮುಸ್ಲಿಯಾರ್, ಇರ್ಫಾನ್,ಶಿಹಾಬ್ ಮೊದಲಾದವರು ಕಾರ್ಯಕರ್ತರು ಸಹಕರಿಸಿದರು.

ವರದಿ: ಯನ್ನೆಮ್ಮೆಸ್ ಸಖಾಫಿ