janadhvani

Kannada Online News Paper

ಸೋಮೇಶ್ವರ ಉಚ್ಚಿಲ ಅಂಡರ್ ಪಾಸ್ ರಸ್ತೆಯ ದುರವಸ್ಥೆ…

ಬರಹ : ಮುಹಮ್ಮದ್ ಉಳ್ಳಾಲ್.
ಮೊಬೈಲ್ : 7022822983


ಸೋಮೇಶ್ವರ ಉಚ್ಚಿಲದ ಅಂಡರ್ ಪಾಸ್ ರಸ್ತೆಯು ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಜಲಾವೃತ ಗೊಂಡಿದೆ.ಮಳೆಗಾಲದಲ್ಲಿ ಇಲ್ಲಿಯ ಅಂಡರ್ ಪಾಸ್ ಒಳಗಡೆ ಮಳೆ ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಸ್ಥಳೀಯ ನಿವಾಸಿಗಳೂ, ವಾಹನ ಸವಾರರೂ ಸಂಚರಿಸಲು ಹರ ಸಾಹಸ ಪಡುವಂತಾಗಿದೆ. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ.

ಅಂಡರ್ ಪಾಸ್ ಗಳನ್ನು ನಿರ್ಮಿಸುವಾಗ ಸಲೀಸಾಗಿ
ಮಳೆ ನೀರು ಹೊರ ಹೋಗುವಂತೆ ವೈಜ್ಞಾನಿಕ
ರೀತಿಯಲ್ಲಿ ನಿರ್ಮಾಣ ಮಾಡದೇ ಇರುವುದರಿಂದ ಈ ಸಮಸ್ಯೆಗಳು ಉದ್ಭವಿಸುತ್ತಿದ್ದು, ಪ್ರತೀ ಮಳೆಗಾಲದಲ್ಲಿ ಇಲ್ಲಿಯ ಜನರು ನರಕ ಯಾತನೆ ಅನುಭವಿಸುವಂತಾಗಿದೆ.ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದರಿಂದ ಅಂಡರ್ ಪಾಸ್
ನಲ್ಲಿ ನೀರು ನಿಂತು ಕೃತಕ ಈಜು ಕೊಳ ನಿರ್ಮಾಣವಾಗಿದೆ.

ಸ್ಥಳೀಯ ಜನರು ಪ್ರತೀ ಬಾರಿ ಮಳೆ ಬಂದಾಗಲೂ ಈ ಸಮಸ್ಯೆಯಲ್ಲಿ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಇಲ್ಲಿಯ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಈ ಸಮಸ್ಯೆಯ ಕಡೆಗೆ ಗಮನ ಹರಿಸಬೇಕಾಗಿದೆ.