ಧರ್ಮಸ್ಥಳ: ಕೊರೊನಾ ವ್ಯೆರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಜನರು ಕೆಲಸ ಇಲ್ಲದೆ ಸಂಕಷ್ಟದಲ್ಲಿರುವ ಇಂತಹ ಸಮಯದಲ್ಲಿ ಎಸ್ಸೆಸ್ಸೆಫ್ ಕನ್ಯಾಡಿ ಶಾಖೆಯ ವತಿಯಿಂದ ಬದ್ರಿಯಾ ಜುಮ್ಮಾ ಮಸೀದಿ ಕನ್ಯಾಡಿ ಯ ಆದೀನದಲ್ಲಿ ಬರುವ ಸುಮಾರು 105 ಕ್ಕೂ ಹೆಚ್ಚು ಮನೆಗಳಿಗೆ ಎಪ್ರಿಲ್ 15 ರ ಬುಧವಾರದಂದು ಅಕ್ಕಿ ಹಾಗೂ ಅಗತ್ಯ ಸಾಮಾಗ್ರಿಳ ಕಿಟ್ ವಿತರಿಸಲಾಯಿತು.

ಸರ್ವ ಧರ್ಮೀಯರಿಗೂ ಕಿಟ್: ಮಸೀದಿಗೆ ಒಳಪಟ್ಟ ಶಾಖೆಯು ಸಂಯೋಜಿಸಲ್ಪಟ್ಟ ಕಿಟ್ಟ್ ಆಗಿದ್ದರೂ ಲಾಕ್ ಡೌನ್ ಸಂಕಷ್ಟದಲ್ಲಿರುವ ಕೇವಲ ಮುಸ್ಲಿಂ ಕುಟುಂಬಗಳಿಗೆ ಮಾತ್ರ ನೀಡದೆ ಸ್ಥಳೀಯ ಆಯ್ದ ಇತರ ಧರ್ಮೀಯರಿಗೂ ನೀಡಿ ಸಾಮಾಜಿಕ ಕಾಲಜಿ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಕಮಿಟಿ ಅದ್ಯಕ್ಷರು ಅಬೂಬಕ್ಕರ್ ಸಿದ್ದಿಕ್, ಪ್ರದಾನ ಕಾರ್ಯದರ್ಸಿ ಅಬ್ದುಲ್ ಕರೀಮ್ ಕನ್ಯಾಡಿ, KCF ನಾಯಕರಾದ ಸಲೀಮ್ ಕನ್ಯಾಡಿ, ಎಸ್ಸೆಸ್ಸೆಫ್ ಕನ್ಯಾಡಿ ಶಾಖೆಯ ಮಾಜಿ ಅಧ್ಯಕ್ಷರು ನವಾಝ್ ,ಕೊಶಾಧಿಕಾರಿ ಸಿದ್ದೀಕ್ ದೊಂಡೋಲೆ ಮತ್ತು ಆಡಳಿತ ಕಮಿಟಿ ಸದಸ್ಯರಾದ ಅಬ್ದುಲ್ ಹಮೀದ್ ಕನ್ಯಾಡಿ ಉಪಸ್ಥಿತರಿದ್ದರು.






