ಅಬುಧಾಬಿ: ಕೆ.ಸಿ.ಎಫ್ ಅಬುಧಾಬಿ ಝೋನ್ ಇದರ 2019-2021’ರ ವಾರ್ಷಿಕ ಮಹಾ ಸಭೆಯು ಈತ್ತೀಚೆಗೆ ಕೆ.ಸಿ.ಎಫ್ ಅಬುಧಾಬಿ ಸೆಂಟರಿನಲ್ಲಿ ಮುಹಮ್ಮದ್ ಕುಂಞ ಸಖಾಫಿ ಈಶ್ವರಮಂಗಳ ಇವರ ಅದ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಐ.ಎನ್.ಸಿ ಮುಖ್ಯಸ್ಥರಾದ ಡಾ!ಶೈಖ್ ಭಾವ ಉದ್ಘಾಟಿಸಿ, ಮುಹಮ್ಮದ್ ಹಕಿಂ ಸ್ವಾಗತಿಸಿದರು, ಲೆಕ್ಕ ಪತ್ರವನ್ನು ಇಬ್ರಾಹಿಂ ಬ್ರೈಟ್ ಮಾರ್ಬಲ್ ಮಂಡಿಸಿದರು.
ಕೆ.ಸಿ.ಎಫ್ ಅಬುಧಾಬಿ ಝೋನ್ 2019-2021 ಇದರ ನೂತನ ಸಮಿತಿ ಅಧ್ಯಕ್ಷರಾಗಿ ಹಸೈನಾರ್ ಅಮಾನಿ ಅಜ್ಜಾವರ,ಪ್ರ.ಕರ್ಯದರ್ಶಿ ಎನ್.ಕೆ ಸೀದ್ದೀಕ್ ಅಳಿಕೆ,ಕೋಶಾಧಿಕಾರಿಯಾಗಿ ಹಾಜಿ!ಮುಹಮ್ಮದಲಿ ಬ್ರೈಟ್ ಮಾರ್ಬಲ್.
ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಮುಹಮ್ಮದ್ ಹಕೀಮ್ ತುರ್ಕಳಿಕೆ ಕಾರ್ಯದರ್ಶಿಯಾಗಿ ಉಮ್ಮರ್ ಈಶ್ವರಮಂಗಲ,ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ನವಾಝ್ ಕೋಟೆಕ್ಕಾರ್ ಕಾರ್ಯದರ್ಶಿಯಾಗಿ ಇಮ್ರಾನ್ ಕೆ.ಸಿ ರೋಡ್,ಶಿಕ್ಷಣ ವಿಭಾಗದ ಅದ್ಯಕ್ಷರಾಗಿ ಕೆ.ಎಚ್ ಮುಹಮ್ಮದ್ ಕುಂಞ ಸಖಾಫಿ ಈಶ್ವರಮಂಗಳ ಕಾರ್ಯದರ್ಶಿಯಾಗಿ ಮೂಸಾ ಮದನಿ ಸಂಪ್ಯ,ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಹಮೀದ್ ಮುಸ್ಲಿಯಾರ್ ಕುಪೆಟ್ಟಿ ಕಾರ್ಯದರ್ಶಿಯಾಗಿ ಅರ್ಷದ್ ಕುತ್ತಾರ್,ಇಹ್ಸನ್ ವಿಭಾಗದ ಅಧ್ಯಕ್ಷರಾಗಿ ಅಬೂಬಕ್ಕರ್ ಕಂಬಳಬೆಟ್ಟು ಕಾರ್ಯದರ್ಶಿಯಾಗಿ ಹಾಫೀಲ್ ಸಯೀದ್ ಹನೀಫಿ,ಕಚೇರಿ ವಿಭಾಗದ ಅಧ್ಯಕ್ಷರಾಗಿ ಅಶ್ರಫ್ ಸರಳೀಕಟ್ಟೆ ಕಾರ್ಯದರ್ಶಿಯಾಗಿ ಲತೀಫ್ ಕನ್ನಡ್ಕ,ಐ-ಟೀಂ ವಿಭಾಗದ ಚೇರ್ಮೆನ್ಯಾಗಿ ಕಬೀರ್ ಬಯಂಬಾಡಿ ಕನ್ವಿನರಾಗಿ ಹಾಫಿಲ್ ಅಬ್ದುಲ್ ಮಜೀದ್ ಸಂಪ್ಯ ಹಾಗು ಸನ್ನದ ಸಂಘದ ಮುಖ್ಯಸ್ಥರಾಗಿ ಮುಹಮ್ಮದ್ ಕುಂಞ ಈಶ್ವರಮಂಗಲ,ಶೇರಿಫ್ ನಾಳ,ಮುಹಮ್ಮದ್ ಕುಂಞ ಅಡ್ಕ,ಇಬ್ರಾಹಿಂ ಬ್ರೈಟ್ ಮಾರ್ಬಲ್ ಆಯ್ಕೆಯಾದರು.
ಕಾರ್ಯಕ್ರಮದ ಕೊನೆಯಲ್ಲಿ ಎನ್.ಕೆ ಸಿದ್ದೀಕ್ ದನ್ಯವಾದಗೈದರು.