ತಾಮರಶ್ಶೇರಿ: ಕೇರಳದ ತಾಮರಶ್ಶೇರಿಯ ಓಮರಶ್ಶೇರಿ ಗ್ರಾಮದ ವೆಳ್ಳಚಾಲ್ ಪ್ರದೇಶದ ನಿವಾಸಿಗಳ ದುರಂತಮಯ ಸಂಚಾರಕ್ಕೆ ಸಾಂತ್ವನವಾಗಿ ಇರುತುಳ್ಳಿ ಹೊಳೆ ದಾಟಲು ಕೇರಳ ರಾಜ್ಯ SჄS ಸಾಂತ್ವನ ಸಮಿತಿ ನಿರ್ಮಿಸಿದ ಬ್ರಹದಾಕಾರದ ಉಕ್ಕಿನ ತೂಗು ಸೇತುವೆಯನ್ನು ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರು ಭಾನುವಾರ ಉದ್ಘಾಟಿಸಿ ನಾಡಿಗೆ ಸಮರ್ಪಿಸಿದರು.

ಹೊಳೆಯ ತೀರದಲ್ಲಿ ವಾಸಿಸುತ್ತಿರುವ ನೂರಕ್ಕಿಂತಲೂ ಮಿಕ್ಕ ಕುಟುಂಬಗಳು ಪಕ್ಕದ ಕೊಡುವಳ್ಳಿ ನಗರಸಭೆಯ ಅಂಡೋಣ, ತೆಕ್ಕೆತಡ್ಕ ಭಾಗಕ್ಕೆ ತೆರಳಲು ಹಲವು ವರ್ಷಗಳಿಂದ ಬಳಸುತ್ತಿದ್ದ ಹಳೇಕಾಲದ ಮರದ ಸೇತುವೆಯನ್ನು ಎರಡು ಬಾರಿ ದುರಸ್ಥಿಗೊಳಿಸಿದರೂ ಕಳೆದ ವರ್ಷದ ನೆರೆಹಾವಳಿಯಲ್ಲಿ ಕೊಚ್ಚಿ ಹೋಗಿತ್ತು.
ಇದರಿಂದಾಗಿ ತಾಮರಶ್ಶೇರಿ ತಾಲೂಕು ಆಸ್ಪತ್ರೆ ಹಾಗೂ ಶಾಲಾ ಕಾಲೇಜು ಮುಂತಾದ ಅತ್ಯಗತ್ಯ ಕಾರ್ಯಗಳಿಗೆ ತೆರಳಲು ಸುಮಾರು ಎರಡು ಕಿಲೋಮೀಟರಿಗಿಂತಲೂ ಅಧಿಕ ಕಾಲು ದಾರಿಯನ್ನು ಬಳಸಿ ಜನರು ಕಷ್ಟಪಡುತ್ತಿರುವುದನ್ನು ಮನಗಂಡ SჄS ಸಾಂತ್ವನ ಸಮಿತಿಯು ಅದಕ್ಕೊಂದು ಶಾಶ್ವತ ಪರಿಹಾರವಾಗಿ ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಉಕ್ಕಿನ ತೂಗು ಸೇತುವೆಯನ್ನು ನಿರ್ಮಿಸಿ ಕೊಟ್ಟಿದೆ.

ಇದರ ಉದ್ಘಾಟನಾ ಸಮಾರಂಭವು S M A ರಾಜ್ಯಾಧ್ಯಕ್ಷರಾದ. ಕೆ.ಕೆ ಅಹಮದ್ ಕುಟ್ಟಿ ಮುಸ್ಲಿಯರ್ ಕಾಟಿಪಾರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ. N ಅಲಿ ಅಬ್ದುಲ್ಲಾ, SჄ S ಕೇರಳ ರಾಜ್ಯ ಉಪಾಧ್ಯಕ್ಷರಾದ ಸೈಯದ್ ಮುಹಮ್ಮದ್ ತುರಾಬ್ ಸಖಾಫಿ, PTA ರಹೀಂ MLA, SჄS ಕೇರಳ ರಾಜ್ಯ ಕಾರ್ಯದರ್ಶಿಮಜೀದ್ ಕಕ್ಕಾಡ್, SჄS ಜಿಲ್ಲಾಧ್ಯಕ್ಷರಾದ ಮಹಮ್ಮದಾಲಿ ಸಖಾಫಿ ವಳ್ಳಿಯಾಡ್, ನಾಸರ್ ಚೆರ್ವಾಡಿ, ಕೆ.ಕೆ ರಾಧಾಕೃಷ್ಣನ್, ಟಿ.ಟಿ ಮನೋಜ್, ಮಮ್ಮಿಂಞಿ ಮಾಸ್ಟರ್ ಮುಂತಾದವರು ಭಾಷಣ ಮಾಡಿದರು.
ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ















ಇನ್ನಷ್ಟು ಸುದ್ದಿಗಳು
15,000 ಜನರನ್ನು ಕೊಲ್ಲುವ ಗುರಿ: ಮುಹರಂ ಕಾರ್ಯಕ್ರಮದಲ್ಲಿ ವಿಷಪೂರಿತ ಮಾತ್ರೆಗಳನ್ನು ವಿತರಿಸಿದ ವ್ಯಕ್ತಿ ಬಂಧನ
‘ತೂಫಾನ್’ ಗೆ ಮರ್ಕಝ್ ಸಾಥ್ : ಕಾಂತಪುರಂ ಉಸ್ತಾದ್- ಗೃಹ ಸಚಿವ ರಮೇಶ್ ಚೆನ್ನಿತ್ತಲ ಸಮಾಲೋಚನೆ
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ