ವಿಟ್ಲ: ಪ್ರತಿವರ್ಷದಂತೆ ಈ ವರ್ಷವೂ ಪುಣ್ಯ ರಂಜಾನ್ ತಿಂಗಳ ಪ್ರಯುಕ್ತ ಕೊಡಂಗಾಯಿ,ಹಾಗೂ ಟಿಪ್ಪು ನಗರ, ಕರ್ಕಳ ಪರಿಸರದ ಆಯ್ದ 15 ಬಡ ಕುಟುಂಬಗಳಿಗೆ ಅಲ್ ಅಮೀನ್ ಯೂತ್ ಫೆಡರೇಶನ್ (ರಿ) ವತಿಯಿಂದ ಮಾಹಿತಿ ಕಲೆಹಾಕಿ ಸ್ಪೆಷಲ್ ರಂಜಾನ್ ಕಿಟ್ ಸೋಮವಾರ ವೃತ 1 ರಂದು ವಿತರಿಸಲಾಯಿತು.
ಸ್ಥಳೀಯ ಯುವಕರು ಹಾಗೂ ಸಮಿತಿ ವರಿಷ್ಟರ ಸಮ್ಮುಖದಲ್ಲಿ ಮನೆ ಬಾಗಿಲಿಗೆ ತೆರಳಿ ವಿತರಿಸಲಾಯಿತು ಈ ಒಂದು ಪುಣ್ಯ ಕಾರ್ಯಕ್ಕೆ ಸಮಿತಿ ಅಧ್ಯಕ್ಷರಾದ ಅಬ್ದುರಝಾಕ್ ಎಂ ಕೆ ನೇತೃತ್ವದಲ್ಲಿ ಚಾಲನೆ ನೀಡಲಾಯಿತು ಸಮಿತಿ ಉಪಾಧ್ಯಕ್ಷರಾದ ಶರೀಫ್ ಮೆಳಂಗಡಿ, ಸದಸ್ಯರಾದ ರಫೀಕ್ ಪಿ, ಕಾರ್ಯದರ್ಶಿ ಮಜೀದ್ ಟಿ ಎಂ, ಸಂಚಾಲಕರಾದ ಅಝರುದ್ದೀನ್ ಆರ್ ಸಿ ಕೆ, ಸದಸ್ಯರಾದ ಅಶ್ರಫ್ ಡಿ ಎ, ಉಪಾಧ್ಯಕ್ಷರಾದ ರಫೀಕ್ ಆರ್ ಎಂ, ಕೊಶಾದಿಕಾರಿ ಲತೀಫ್ ಎಲ್ ಎಂ, ಪ್ರದಾನ ಕಾರ್ಯದರ್ಶಿ ಉಮರ್ ಕಮ್ಮಾಡಿ, ಹಾಗೂ ಸ್ಥಳೀಯ ಯುವಕರು ಉಪಸ್ಥಿತರಿದ್ದರು_
ವರದಿ: ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ