ರಿಯಾದ್: ರಮಝಾನ್ ಪ್ರಯುಕ್ತ ಸೌದಿ ಅರೇಬಿಯಾದಲ್ಲಿ ಸಾರ್ವಜನಿಕ ಕ್ಷಮಾಪಣೆ ಭಾಗವಾಗಿ ಕೆಲವು ಖೈದಿಗಳಿಗೆ ಜೈಲಿನಿಂದ ಮುಕ್ತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿದೇಶೀಯರು ಸೇರಿದಂತೆ ಮುಕ್ತಿ ದೊರೆಯಲಿರುವವರ ಪಟ್ಟಿಗೆಗೆ ಸಲ್ಮಾನ್ ರಾಜ ಅನುಮೋದನೆ ನೀಡಲಿದ್ದು, ಸಾವಿರಕ್ಕಿಂತಲೂ ಹೆಚ್ಚಿನ ಖೈದಿಗಳಿಗೆ ಮುಕ್ತಿ ದೊರೆಯಲಿದೆ.
ರಮಝಾನ್ ಭಾಗವಾಗಿ ಸೌದಿಯ ಆಡಳಿತಾಧಿಕಾರಿ ಸಲ್ಮಾನ್ ರಾಜ ಸಾರ್ವಜನಿಕ ಕ್ಷಮಾಪಣೆಗೆ ಆದೇಶ ನೀಡಲಿದ್ದು,ಕಳೆದ ವರ್ಷ ಇದೇ ಅವಧಿಯಲ್ಲಿ 1148 ಮಂದಿಗೆ ಬಂಧನದಿಂದ ಮುಕ್ತಿ ನೀಡಿದ್ದರು. ರಾಜನ ಆದೇಶದಂತೆ ಪ್ರತೀ ದಿನ ಅರ್ಹನ ಪಟ್ಟಿಯನ್ನು ತಯಾರು ಗೊಳಿಸಲಾಗುತ್ತದೆ.
ಇದರ ಅನುಸಾರ ಬಿಡುಗಡೆ ನಡೆಯಲಿದೆ. ಈ ಪೈಕಿ ವಿದೇಶೀಯರೂ ಸೇರಿದ್ದು, ಅವರನ್ನು ಊರಿಗೆ ಕಳುಹಿಸಲಾಗುತ್ತದೆ. ಸೆರೆವಾಸದ ಅರ್ಧದಷ್ಟು ಮುಗಿಸಿದವರೂ ಈ ಪಟ್ಟಿಯಲ್ಲಿ ಸೇರಲಿದ್ದಾರೆ. ಐದು ಲಕ್ಷ ರಿಯಾಲ್ಗಿಂತ ಹೆಚ್ಚಿನ ಹಣ ಭಾದ್ಯತೆ ಇರುವವರ ಪ್ರಕರಣಗಳನ್ನು ನ್ಯಾಯಾಲಯ ಮತ್ತು ಆರ್ಥಿಕ ಖಾತೆಯು ಪರಿಶಿಲಿಸಲಿದೆ. ನಂತರ ಅವರ ಬಗ್ಗೆ ತೀರ್ಮಾನ ಉಂಟಾಗಲಿದೆ.
ಮಾನವ ಸಾಗಾಣಿಕೆ, ಬಾಲ ಕಿರುಕುಳ, ದೇಶ ದ್ರೋಹ, ಭಾರೀ ಆರ್ಥಿಕ ವಂಚನೆ ಮುಂತಾದ ಗಂಭೀರ ಆರೋಪ ಹೊತ್ತವರಿಗೆ ಸಾರ್ವಜನಿಕ ಕ್ಷಮಾಪಣೆಯ ಪ್ರಯೋಜನ ದೊರೆಯುವುದಿಲ್ಲ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ