ರಿಯಾದ್: ರಮಝಾನ್ ಪ್ರಯುಕ್ತ ಸೌದಿ ಅರೇಬಿಯಾದಲ್ಲಿ ಸಾರ್ವಜನಿಕ ಕ್ಷಮಾಪಣೆ ಭಾಗವಾಗಿ ಕೆಲವು ಖೈದಿಗಳಿಗೆ ಜೈಲಿನಿಂದ ಮುಕ್ತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿದೇಶೀಯರು ಸೇರಿದಂತೆ ಮುಕ್ತಿ ದೊರೆಯಲಿರುವವರ ಪಟ್ಟಿಗೆಗೆ ಸಲ್ಮಾನ್ ರಾಜ ಅನುಮೋದನೆ ನೀಡಲಿದ್ದು, ಸಾವಿರಕ್ಕಿಂತಲೂ ಹೆಚ್ಚಿನ ಖೈದಿಗಳಿಗೆ ಮುಕ್ತಿ ದೊರೆಯಲಿದೆ.
ರಮಝಾನ್ ಭಾಗವಾಗಿ ಸೌದಿಯ ಆಡಳಿತಾಧಿಕಾರಿ ಸಲ್ಮಾನ್ ರಾಜ ಸಾರ್ವಜನಿಕ ಕ್ಷಮಾಪಣೆಗೆ ಆದೇಶ ನೀಡಲಿದ್ದು,ಕಳೆದ ವರ್ಷ ಇದೇ ಅವಧಿಯಲ್ಲಿ 1148 ಮಂದಿಗೆ ಬಂಧನದಿಂದ ಮುಕ್ತಿ ನೀಡಿದ್ದರು. ರಾಜನ ಆದೇಶದಂತೆ ಪ್ರತೀ ದಿನ ಅರ್ಹನ ಪಟ್ಟಿಯನ್ನು ತಯಾರು ಗೊಳಿಸಲಾಗುತ್ತದೆ.
ಇದರ ಅನುಸಾರ ಬಿಡುಗಡೆ ನಡೆಯಲಿದೆ. ಈ ಪೈಕಿ ವಿದೇಶೀಯರೂ ಸೇರಿದ್ದು, ಅವರನ್ನು ಊರಿಗೆ ಕಳುಹಿಸಲಾಗುತ್ತದೆ. ಸೆರೆವಾಸದ ಅರ್ಧದಷ್ಟು ಮುಗಿಸಿದವರೂ ಈ ಪಟ್ಟಿಯಲ್ಲಿ ಸೇರಲಿದ್ದಾರೆ. ಐದು ಲಕ್ಷ ರಿಯಾಲ್ಗಿಂತ ಹೆಚ್ಚಿನ ಹಣ ಭಾದ್ಯತೆ ಇರುವವರ ಪ್ರಕರಣಗಳನ್ನು ನ್ಯಾಯಾಲಯ ಮತ್ತು ಆರ್ಥಿಕ ಖಾತೆಯು ಪರಿಶಿಲಿಸಲಿದೆ. ನಂತರ ಅವರ ಬಗ್ಗೆ ತೀರ್ಮಾನ ಉಂಟಾಗಲಿದೆ.
ಮಾನವ ಸಾಗಾಣಿಕೆ, ಬಾಲ ಕಿರುಕುಳ, ದೇಶ ದ್ರೋಹ, ಭಾರೀ ಆರ್ಥಿಕ ವಂಚನೆ ಮುಂತಾದ ಗಂಭೀರ ಆರೋಪ ಹೊತ್ತವರಿಗೆ ಸಾರ್ವಜನಿಕ ಕ್ಷಮಾಪಣೆಯ ಪ್ರಯೋಜನ ದೊರೆಯುವುದಿಲ್ಲ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು