janadhvani

Kannada Online News Paper

ಮುಸ್ಲಿಂ ಜಮಾಅತ್ ಸಮಾವೇಶ-ಪ್ರತೀ ಸದಸ್ಯರು ಭಾಗವಹಿಸುವಂತೆ ಜಿಲ್ಲಾ ಎಸ್.ವೈ.ಎಸ್.ಕರೆ

ಕರ್ನಾಟಕದಲ್ಲಿರುವ ಅಹ್ಲುಸ್ಸುನ್ನತಿ ವಲ್ ಜಮಾ‌ಅತಿನ ಆಶಯಾದರ್ಶಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ವಿಶ್ವಾಸಿಗಳಿಗೆ ಕಾರ್ಯಾಚರಿಸಲು ಮತ್ತು ಮುಸ್ಲಿಂ ಸಮುದಾಯದ ಬೇಡಿಕೆಗಳನ್ನು ಸರಕಾರ ಹಾಗೂ ಆಡಳಿತ ವರ್ಗಕ್ಕೆ ಸಮರ್ಪಕವಾಗಿ ಮತ್ತು ಸಕಾಲಿಕವಾಗಿ ತಲುಪಿಸಲು ಸಂಘಶಕ್ತಿಯ ಆವಶ್ಯಕತೆಯನ್ನು ಮನಗಂಡು ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಉಸ್ತಾದ ರ ನಿರ್ದೇಶನದಂತೆ ಕರ್ನಾಟಕ ರಾಜ್ಯ ಸುನ್ನೀ ಜಂ ಇಯ್ಯತುಲ್ ಉಲಮಾದ ಅಧೀನದಲ್ಲಿ ಕರ್ನಾಟಕದ ಮುಸ್ಲಿಂ ಜಮಾ‌ಅತ್ ಎಂಬ ಸಂಘಟನೆಯನ್ನು ಕರ್ನಾಟಕಾದ್ಯಂತ ಅಸ್ತಿತ್ವಕ್ಕೆ ತರಲು ತೀರ್ಮಾನಿಸಲಾಗಿದೆ.

ಇದರ ರಾಜ್ಯ ಮಟ್ಟದ ಘೋಷಣಿ ಸಮಾವೇಶವು ಇದೇ ಬರುವ ದಿನಾಂಕ 27-1-2019 ನೇ ಆದಿತ್ಯವಾರ ಸಾಯಂಕಾಲ 4 ಕ್ಕೆ ಬೆಂಗಳೂರು ಹಳೇ ಹಜ್ಜ್ ಕ್ಯಾಂಪ್ ಮಿಲ್ಲರ್ಸ್ ರೋಡ್ ಮೈದಾನದಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮವು ಜನ ಸಹಸ್ರಗಳ ಪಾಲ್ಗೊಳ್ಳುವಿಕೆಯಿಂದ ಸಮ್ರಧ್ಧವಾಗಬೇಕಾಗಿದೆ.ಆದುದರಿಂದ ಎಸ್ ವೈ ಎಸ್ ದಕ್ಷಿಣ ಕನ್ನಡ ಜಿಲ್ಲೆ ಝೋನ್, ಸೆಂಟರ್, ಬ್ರಾಂಚ್ ಗಳ ಪ್ರತೀ ಸದಸ್ಯರು ಗಳು ಬೆಂಗಳೂರಲ್ಲಿ ಈ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಲು. ಜಿಲ್ಲಾ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com