janadhvani

Kannada Online News Paper

ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ- ಇಸಾಬಾ ಕ್ಯಾಂಪ್

ಎಸ್‌ವೈಎಸ್ ದ.ಕ ಜಿಲ್ಲಾ (ವೆಸ್ಟ್) ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿರುವ ಇಸಾಬ ಕಾರ್ಯಕರ್ತರಾಗಿ “ಇಸಾಬಾ ಕ್ಯಾಂಪ್” ಜಿಲ್ಲಾಧ್ಯಕ್ಷರಾದ ಇಸ್ಹಾಖ್ ಝುಹ್ರಿ ಕಾನಕೆರೆರವರ ಅಧ್ಯಕ್ಷತೆಯಲ್ಲಿ ಅಲ್-ಮದೀನಾ ಕಮ್ಯೂನಿಟಿ ಹಾಲ್ ತಿಬ್ಲೆಪದವುನಲ್ಲಿ ನಡೆಯಿತು.

ಎಸ್‌.ವೈ.ಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ ವೈ.ಎಸ್ ಕಾಸರಗೋಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೀಂ ಮಾಸ್ಟರ್, ಎಸ್.ವೈ.ಎಸ್ ಜಿಲ್ಲಾ ಉಪಾಧ್ಯಕ್ಷರಾದ ಬಶೀರ್ ಮದನಿ ಕೂಳೂರು ,ಜಿಲ್ಲಾ ನಾಯಕ ಹಾಫಿಳ್ ಯಾಕೂಬ್ ಸಅದಿ ನಾವೂರು ರವರು ತರಗತಿ ಮಂಡಿಸಿದರು.

ಮಂಜನಾಡಿ ಅಲ್ ಮದೀನಾ ಜನರಲ್ ಮೇನೇಜರ್ ಅಬ್ಸುಲ್ ಖಾದರ್ ಸಖಾಫಿ ,ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾದ್ಯಕ್ಷ ಆಲಿಕುಂಞಿ ಪಾರೆ, ಎಸ್.ವೈ.ಎಸ್ ಕಾಸರಗೋಡು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿರಾಜುದ್ದೀನ್, ಎಸ್.ವೈ.ಎಸ್ ರಾಜ್ಯ ನಾಯಕರಾದ ಮಹಮ್ಮದಲಿ ಸಖಾಫಿ ಅಶ್-ಅರಿಯ್ಯ ಮೊದಲಾದ ನಾಯಕರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ನಾಯಕ ಆಸಿಫ್ ಹಾಜಿ ಕೃಷ್ಣಾಪುರ, ಜಿಲ್ಲಾ ಕೋಶಾಧಿಕಾರಿ ನಝೀರ್ ಮುಡಿಪು, ಜಿಲ್ಲಾ ಕಾರ್ಯದರ್ಶಿಗಳಾದ ಬದ್ರುದ್ದೀನ್ ಅಝ್ಹರಿ ಕೈಕಂಬ, ರಝಾಕ್ ಭಾರತ್, ಇಸ್ಮಾಈಲ್ ಮಾಸ್ಟರ್ ಮರಿಕ್ಕಳ, ಜಿಲ್ಲಾ ನಾಯಕರಾದ ತೌಸೀಫ್ ಸಅದಿ, ಕಾಸಿಂ ಲತೀಫಿ ಮಂಜನಾಡಿ, ಜಬ್ಬಾರ್ ಕಣ್ಣೂರು, ಹಸನ್ ಪಾಂಡೇಶ್ವರ, ಅಬ್ದುಲ್ಲಾ ಕೊಳಕೆ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಇಸಾಬ ಕಾರ್ಯದರ್ಶಿ ಫಾರೂಖ್ ಶೇಡಿಗುರಿ ಸ್ವಾಗತಿಸಿದರು. ಇಸಾಬ ಕ್ಯಾಂಪ್ ಚೇರ್ಮೇನ್ ಅಬ್ದುಲ್‌ ಹಮೀದ್ ಕಿನ್ಯ ವಂದಿಸಿದರು.