ಶಿವಮೊಗ್ಗ: ಹೊಸನಗರ ತಾಲೂಕಿನ ಜಯನಗರ ಶಾಫಿ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ & ನೂರುಲ್ ಇಸ್ಲಾಂ ಅರಬಿಕ್ ಮದ್ರಸ ಮತ್ತು SSF SYS ಜಯನಗರ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1449ರ ಜನ್ಮ ದಿನಾಚರಣೆ ಪ್ರಯುಕ್ತ ಇಂದಿನಿಂದ 3 ದಿನಗಳ ಕಾಲದ ‘ಬೃಹತ್ ಮೀಲಾದ್ ಜಲ್ಸ’ ಕಾರ್ಯಕ್ರಮ ನಡೆಯಲಿದೆ.
ಇಂದು ಜುಮುಅಃ ನಮಾಝ್ನ ನಂತರ ಮುಹ್ಯುದ್ದೀನ್ ಶಾಫಿ ಜುಮುಅಃ ಮಸ್ಜಿದ್ನ ಖತೀಬರಾದ ಶಾಹುಲ್ ಹಮೀದ್ ಸಖಾಫಿ ನೆಲ್ಯಾಡಿ, ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಖ್ ಸಖಾಫಿ ವಳವೂರು, ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಷಾ ಜಯನಗರ, SSF& SYS ನಾಯಕರ ನೇತೃತ್ವದಲ್ಲಿ ಧ್ವಜಾರೋಹಣ ಹಾಗೂ ಐ.ಕೆ ಇಕ್ಬಾಲ್ ಮದನಿ ಕುಕ್ಕೋಟ್ಟುರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು.
27-9-2024ರಂದು ಶುಕ್ರವಾರ ಮಗ್ರಿಬ್ ನಮಾಝ್ನ ಬಳಿಕ ನೂರುಲ್ ಇಸ್ಲಾಂ ಅರಬಿಕ್ ಮದ್ರಸಾ ವಿಧ್ಯಾರ್ಥಿಗಳಿಂದ ‘ಜಲ್ಸತುಲ್ ಮಹಬ್ಬ ಮೀಲಾದ್ ಮೆಹ್ಪಿಲ್’, ದಿನಾಂಕ 28-9-2024ರಂದು ಮಗ್ರಿಬ್ ನಮಾಝ್ನ ಬಳಿಕ ಅಲ್-ಹಾಜ್ ಅಸಯ್ಯಿದ್ ಅಬೂಬಕರ್ ಸಿದ್ಧೀಖ್ ತಙ್ಙಳ್ ಅಲ್-ಹಾದಿ ತೀರ್ಥಹಳ್ಳಿರವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಮಂಗಳೂರಿನ ಪ್ರಖ್ಯಾತ ಅಲ್-ಅಮೀನ್ ಇಖ್ವಾನ್ ತಂಡದಿಂದ ಬುರ್ದಾ ಮಜ್ಲಿಸ್, ಮಾಸ್ಟರ್ ಸಲ್ಮಾನುಲ್ ಫಾರಿಶ್ ಉಳ್ಳಾಲರವರಿಂದ ನಅ್ತೇ ಶರೀಫ್ ನಡೆಯಲಿದೆ.
29-9-2024ರಂದು ಬೆಳಿಗ್ಗೆ 9 ಘಂಟೆಗೆ ಬೃಹತ್ ಮೀಲಾದ್ ಜಾಥಾ ನಡೆಯಲಿದೆ. ಪ್ರಸ್ತುತ ಜಾಥಾದಲ್ಲಿ ಪ್ರಸಿದ್ಧ ವಾಗ್ಮಿಯೂ, ಜಯನಗರದ ಮಾಜಿ ಖತೀಬರೂ ಆದ D.A ಹಸನ್ ಸಖಾಫಿ ಬೆಜ್ಜವಳ್ಳಿಯವರು ಮುಖ್ಯ ಭಾಷಣ ನಡೆಸಲಿದ್ದಾರೆ.
ಈ ಕಾರ್ಯಕ್ರಮಗಳಲ್ಲಿ ಜೆ.ಎಂ ಸಿದ್ಧೀಖ್ ಜಯನಗರ, ಜೆ.ಎಂ ಝುಬೈರ್ ಹಾಜಿ ಜಯನಗರ, ಹೊಸನಗರ ಖತೀಬರಾದ ಯೂಸುಫ್ ಸಖಾಫಿ ಬನಾರಿ, ಹೊಸನಗರ ಶಾಫಿ ಜುಮುಅಃ ಮಸ್ಜಿದ್ ಅಧ್ಯಕ್ಷರಾದ ಅಮಾನುಲ್ಲಾ, ಉರುಮಾಲ್ ಮಾಸಿಕದ ಸಂಪಾದಕರಾದ ಐ.ಕೆ ಇಕ್ಬಾಲ್ ಮದನಿ, ಕುಕ್ಕೋಟ್ಟು, ಜೆ.ಎಂ ಮುಹಮ್ಮದ್ ಜಯನಗರ, ಹಂಝ ಜಯನಗರ, ನಾಸಿರ್ ಜಯನಗರ, ಶೌಕತ್ ಅಲಿ ಜಯನಗರ, ಜಯನಗರ ಹನಫೀ ಮಸ್ಜಿದ್ ಇಮಾಂ ಮೌಲಾನಾ ಅಬ್ದುಲ್ ಸಲಾಮ್ ಹಝ್ರತ್, ಹನಫಿ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಅಶ್ರಫ್, ತೌಫೀಖ್ ಜಯನಗರ, ಚಿಕನ್ ಅಶ್ರಫ್ ಜಯನಗರ, ಈ. ಅಮಾನುಲ್ಲಾ ಜಯನಗರ ಸೇರಿದಂತೆ ಅನೇಕ ಉಲಮಾ-ಉಮರಾಗಳು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ