ಕಾಸರಗೋಡು | ರಿಯಾಝ್ ಮೌಲವಿ ಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಆರೋಪಿಗಳನ್ನು ಖುಲಾಸೆಗೊಳಿಸಿದ ಕೋರ್ಟ್ ತೀರ್ಪು ಕೇಳಿ ರಿಯಾಝ್ ಮೌಲವಿ ಪತ್ನಿ ಬೇಸರ ಸಹಿಸಲಾಗದೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು. ಮೂವರು ಆರೋಪಿಗಳನ್ನು ಕಾಸರಗೋಡು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ತೀರ್ಪು ಕೇಳಿ ಅಳುತ್ತಿದ್ದ ರಿಯಾಝ್ ಮೌಲವಿ ಪತ್ನಿ ಸೈದಾ, ನ್ಯಾಯಾಲಯದ ಮೇಲೆ ಭರವಸೆ ಇತ್ತು, ಆದರೆ ನ್ಯಾಯ ಸಿಗಲಿಲ್ಲ ಎಂದರು. ತೀರ್ಪು ಕೇಳಲು ಹೆಂಡತಿ ಮಗುವಿನೊಂದಿಗೆ ಬಂದಿದ್ದರು. ರಿಯಾಝ್ ಮೌಲವಿಯ ಸಂಬಂಧಿಕರು ಕೂಡ ನ್ಯಾಯಾಲಯದ ತೀರ್ಪಿನಿಂದ ಆಘಾತಕ್ಕೊಳಗಾಗಿದ್ದೇವೆ ಎಂದು ಹೇಳಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯ ನಿರೀಕ್ಷೆಯಲ್ಲಿದ್ದೆವು, ಆದರೆ ತೀರ್ಪಿನ ಬಗ್ಗೆ ತುಂಬಾ ದುಃಖವಾಗಿದೆ ಎಂದು ಸಹೋದರ ಹೇಳಿದರು.
ಕ್ರಿಯಾ ಸಮಿತಿ ಪದಾಧಿಕಾರಿಗಳೂ ತೀರ್ಪಿನಲ್ಲಿ ನೋವಿದ್ದು, ಷಡ್ಯಂತ್ರ ಹೊರ ಬರಬೇಕು ಎಂದರು. ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ.
ನ್ಯಾಯಾಲಯದ ಆವರಣದಲ್ಲಿ ಜನಸಾಗರವೇ ನೆರೆದಿತ್ತು. ಪೊಲೀಸರು ಕೂಡ ಭಾರೀ ಭದ್ರತೆ ಒದಗಿಸಿದ್ದಾರೆ. ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಒಂದು ಸಾಲಿನ ತೀರ್ಪು ನೀಡಿದೆ. ಆರೆಸ್ಸೆಸ್ ಕಾರ್ಯಕರ್ತರಾದ ಅಜೇಶ್, ನಿತಿನ್ ಕುಮಾರ್ ಮತ್ತು ಅಖಿಲೇಶ್ ಪ್ರಕರಣದ ಆರೋಪಿಗಳು.
ಕಾಸರಗೋಡು ಚೂರಿಯಲ್ಲಿ ನಡೆದ ರಿಯಾಝ್ ಮೌಲವಿ ಹತ್ಯೆ ಕೇರಳವನ್ನೇ ಬೆಚ್ಚಿಬೀಳಿಸಿತ್ತು. ಆರೋಪಿಗಳು ಮಸೀದಿಗೆ ನುಗ್ಗಿ ಹತ್ಯೆ ಮಾಡಿದ್ದಾರೆ. ಕೋಮು ಸಂಘರ್ಷವೇ ಆರೋಪಿಗಳ ಉದ್ದೇಶ ಎಂದು ಆರೋಪಪಟ್ಟಿಯಲ್ಲಿ ದೃಢಪಟ್ಟಿದೆ.
ಚೂರಿ ಎಂಬುದು ಈ ಹಿಂದೆಯೂ ಕೋಮು ಘರ್ಷಣೆಗಳು ಹಾಗೂ ಇಂತಹ ಹಲ್ಲೆ, ಹತ್ಯೆಗಳು ನಡೆದಿರುವ ಪ್ರದೇಶ. ಆದ್ದರಿಂದ, ರಿಯಾಜ್ ಮೌಲವಿ ಹತ್ಯೆಯು ನಿರಂತರ ಪ್ರತಿಭಟನೆಗೆ ಕಾರಣವಾಯಿತು. ಕೊಡಗು ಮೂಲದ ರಿಯಾಝ್ ಮೌಲವಿ 2017 ರ ಮಾರ್ಚ್ 20 ರಂದು ಹತ್ಯೆಗೀಡಾದರು. ಚೂರಿಯಲ್ಲಿ ಮದರಸಾ ಶಿಕ್ಷಕರಾಗಿದ್ದ ರಿಯಾಝ್ ಮೌಲವಿ ಪಕ್ಕದ ಮಸೀದಿಯಲ್ಲಿ ವಾಸವಾಗಿದ್ದರು. ಮೂವರು ಸದಸ್ಯರ ಗುಂಪು ಮಸೀದಿಗೆ ನುಗ್ಗಿ ಈ ಕೃತ್ಯ ಎಸಗಿದೆ. ಘಟನೆಯ ನಂತರ, ಹಲವು ದಿನಗಳ ಕಾಲ ಪ್ರದೇಶದಲ್ಲಿ ಕರ್ಪೂ ಜಾರಿಯಲ್ಲಿತ್ತು.
ಮೂರು ದಿನಗಳೊಳಗೆ ಆರೋಪಿಗಳನ್ನು ಬಂಧಿಸಲಾಗಿದ್ದು, ಕಾಲಮಿತಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಸಾಧ್ಯವಾಗಿರುವುದು ರಿಯಾಝ್ ಮೌಲವಿ ಅವರಿಗೆ ನ್ಯಾಯ ಸಿಗುವ ವಿಶ್ವಾಸ ಮೂಡಿಸಿತ್ತು. ಕೊಲೆಯಾದ 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಆರೋಪಿಗಳು ಅಪರಾಧ ಎಸಗಿದ್ದಾರೆ ಎಂಬುದಕ್ಕೆ ಅಪರಾಧ ನಡೆದ ಸ್ಥಳದಿಂದ ಆರೋಪಿಗಳ ರಕ್ತದ ಮಾದರಿ ಸೇರಿದಂತೆ ವೈಜ್ಞಾನಿಕ ಪುರಾವೆಗಳು ಪೊಲೀಸರಿಗೆ ಲಭಿಸಿತ್ತು.ಡಿಎನ್ಎ ಪರೀಕ್ಷೆಯಿಂದಲೂ ಇದು ದೃಢಪಟ್ಟಿದೆ. ಲೋಪದೋಷ ರಹಿತ ತನಿಖೆ ನಡೆದಿದ್ದರೂ ಆರೋಪಿಗಳು ಹೇಗೆ ಖುಲಾಸೆಗೊಂಡರು ಎಂಬ ಪ್ರಶ್ನೆ ಉದ್ಭವಿಸಿದೆ.
ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಹತ್ಯೆ ನಡೆದಿರುವುದು ದೃಢಪಟ್ಟಿದೆ. ಪ್ರಾಸಿಕ್ಯೂಷನ್ನಿಂದಲೂ ಯಾವುದೇ ತಪ್ಪಿನ ಸೂಚನೆ ಇರಲಿಲ್ಲ. ಇಷ್ಟೆಲ್ಲಾ ಸಾಕ್ಷ್ಯಾಧಾರಗಳಿರುವ ಪ್ರಕರಣದಲ್ಲಿ ಆರೋಪಿಗಳನ್ನು ಹೇಗೆ ಖುಲಾಸೆಗೊಳಿಸಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ರಿಯಾಝ್ ಮೌಲವಿ ಹತ್ಯೆಯಾಗಿ ಏಳು ವರ್ಷಗಳ ನಂತರ ನ್ಯಾಯಾಲಯ ಈ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದಾಗ ನ್ಯಾಯ ನಿರಾಕರಿಸಲಾಗಿದೆ ಎಂಬ ಭಾವನೆ ಮೂಡಿದೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್