ಮಕ್ಕತುಲ್ ಮುಕರ್ರಮಃ: ಮಂಗಳೂರಿನಿಂದ ಉಮ್ರಾಕೆ ತೆರಳಿದ್ದ ಬಂಟ್ವಾಳದ ಐಸಮ್ಮ ಎಂಬವರು ಮಾ.8 ರಿಂದ ಮಕ್ಕಾದ ಮಸ್ಜಿದುಲ್ ಹರಂನಲ್ಲಿ ಕಾಣೆಯಾಗಿದ್ದರು.
ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಕೆಸಿಎಫ್, ಐಸಿಎಫ್ ಕೆಎಂಸಿಸಿ ಸಹಿತವಿರುವ ಕಾರ್ಯಕರ್ತರ ತೀವ್ರ ಪರಿಶ್ರಮದಿಂದ ಎಂಟು ದಿನಗಳ ಬಳಿಕ ಇಂದು ಮಾ.16 ರಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಾದ ಹರಂನಲ್ಲಿ ಕೆಲಸಮಾಡುತ್ತಿರುವ ಕೆಸಿಎಫ್ ನ ಸಕ್ರಿಯ ಕಾರ್ಯಕರ್ತ ಶರೀಫ್ ಸಜಿಪ ರವರು ಮಸ್ಜಿದುಲ್ ಹರಂ ಪರಿಸರದಲ್ಲೇ ಐಸಮ್ಮ ಅವರನ್ನು ಪತ್ತೆಹಚ್ಚಿದ್ದಾರೆ.
ಅವರು ಮಕ್ಕಾದಲ್ಲಿ ತಮ್ಮ ವಾಸ ಸ್ಥಳದಿಂದ ಯಾವುದೇ ಬ್ಯಾಗ್, ಐಡಿ ಕಾರ್ಡ್ ಅಥವಾ ಉಮ್ರಾ ಗ್ರೂಪ್ ನೀಡಿರುವ ಶಾಲ್ ತೆಗೆದುಕೊಳ್ಳದೆ ಹರಂ ಗೆ ತೆರಳಿದ್ದ ಕಾರಣ, ರಮಳಾನ್ ಪ್ರಯುಕ್ತ ಭಾರೀ ಜನಸಂದಣಿಯ ವಾತಾವರಣದಲ್ಲಿ ಮಸ್ಜಿದುಲ್ ಹರಂನಲ್ಲಿ ಪತ್ತೆ ಹಚ್ಚುವುದು ಬಲು ದೊಡ್ಡ ಸವಾಲಾಗಿತ್ತು.
ಇವರ ಪತ್ತೆಯಿಲ್ಲದೆ, ಇವರನ್ನು ಕರಕೊಂಡು ಹೋಗಿದ್ದ ಉಮ್ರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಕುಟುಂಬಸ್ಥರು ತೀವ್ರ ದುಃಖಕ್ಕೀಡಾಗಿದ್ದರು.


















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ