janadhvani

Kannada Online News Paper

ಹಜ್ ಯಾತ್ರಿಕರಿಗೆ ವಿಶ್ವಾಸ ವೀನಸ್ ಸಮುಚ್ಚಯದ ನಿವಾಸಿಗಳಿಂದ ಅದ್ದೂರಿ ಸ್ವಾಗತ

ಮಂಗಳೂರು : ವಿಶ್ವದಾದ್ಯಂತ
ಪವಿತ್ರ ಹಜ್ಜ್ ಕರ್ಮ ಮುಗಿಸಿ ಹಜ್ಜಾಜಿಗಳು ಮಕ್ಕಾ ಹಾಗೂ ಮದೀನಾ ನಗರದಿಂದ ಮರಳಿ ತವರಿಗೆ ಆಗಮಿಸುತ್ತಿದ್ದಾರೆ.

ಕರ್ನಾಟಕದಿಂದ ಹಜ್ಜ್ ಯಾತ್ರೆ ನಿರ್ವಹಿಸಿದ ಮೊದಲ ತಂಡವು ಶುಕ್ರವಾರ ಬೆಂಗಳೂರಿಗೆ ತಲುಪಿದ್ದು, ಇಂದು ಮಂಗಳೂರಿಗೆ ತಲುಪಿದ್ದಾರೆ. ವಿಶ್ವಾಸ್ ವೀನಸ್ ಸಮುಚ್ಚಯದ ನಾಲ್ವರು ಹಜ್ಜಾಜಿಗಳು ಇಂದು ಮಂಗಳೂರು ತಲುಪಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳು ಆದರದಿಂದ ಬರಮಾಡಿಕೊಂಡರು.

ಅಪಾರ್ಟ್‌ಮೆಂಟ್ ಕಮಿಟಿ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಸಮಿತಿಯ ಉಪಾಧ್ಯಕ್ಷ ಫಕೀರಬ್ಬ, ಡಿ.ಎಂ.ಶಮೀಮ್, ವಕೀಲರಾದ ಅಬೂಬಕ್ಕರ್ ಸಿದ್ದೀಕ್ ಎಂ.ಪಿ ಮತ್ತಿತರರು ಹಜ್ಜಾಜಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು.
ವರದಿ : ಹಕೀಂ ಬೋಳಾರ್