ರಿಯಾದ್: ಹಜ್ ಯಾತ್ರೆ ಮುಗಿಸಿ ಮನೆಗೆ ಮರಳುವ ಯಾತ್ರಾರ್ಥಿಗಳಿಗೆ 20 ಲಕ್ಷ ಖುರ್ಆನ್ ಪ್ರತಿಗಳನ್ನು ವಿತರಿಸಲಾಗುತ್ತಿದೆ.ದೊರೆ ಸಲ್ಮಾನ್ ಅವರ ಆದೇಶದಂತೆ, ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಇಲಾಖೆಯು ಈ ಖುರ್ಆನ್ ಗಳನ್ನು ಸಿದ್ಧಪಡಿಸಿದೆ. ಇವುಗಳನ್ನು ದೇಶದ ವಿವಿಧ ಗಡಿ ದ್ವಾರಗಳಲ್ಲಿ ಯಾತ್ರಾರ್ಥಿಗಳಿಗೆ ವಿತರಿಸಲಾಗುತ್ತದೆ.
77 ಭಾಷೆಗಳಲ್ಲಿ ಖುರ್ಆನ್ ಅನುವಾದಗಳನ್ನು ಯಾತ್ರಿಕರಿಗೆ ವಿತರಿಸಲಾಗುತ್ತದೆ. ಇದಕ್ಕಾಗಿ ಧಾರ್ಮಿಕ ವ್ಯವಹಾರಗಳ ಇಲಾಖೆ ಕೌಂಟರ್ಗಳ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಪ್ರತಿ ವರ್ಷ ಹಜ್ಗೆ ಬರುವ ಎಲ್ಲಾ ವಿದೇಶಿ ಯಾತ್ರಾರ್ಥಿಗಳಿಗೆ ದೊರೆ ಸಲ್ಮಾನ್ನಿಂದ ಉಡುಗೊರೆಯಾಗಿ ಮುಸ್ಹಫ್ ಮತ್ತು ಖುರ್ಆನ್ ಅನುವಾದಗಳನ್ನು ವಿತರಿಸಲಾಗುತ್ತದೆ. ಇವುಗಳನ್ನು ಮದೀನಾದಲ್ಲಿರುವ ಕಿಂಗ್ ಫಹದ್ ಖುರ್ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ನಲ್ಲಿ ಮುದ್ರಿಸಲಾಗಿದೆ.
ಹಜ್ ಯಾತ್ರೆ ಮುಗಿಸಿದ ಭಾರತೀಯ ಯಾತ್ರಿಕರ ವಾಪಸಾತಿ ಸೋಮವಾರದಿಂದ ಆರಂಭವಾಗಿದೆ. ಜಿದ್ದಾದಿಂದ ದೆಹಲಿ, ಕೋಲ್ಕತ್ತಾ, ಲಕ್ನೋ ಮತ್ತು ಜೈಪುರಕ್ಕೆ ಮೊದಲ ಬ್ಯಾಚ್ ಹೊರಟಿದೆ. ಮೊದಲ ದಿನ ಸುಮಾರು ಎರಡು ಸಾವಿರ ಯಾತ್ರಿಕರು ಹೊರಟಿದ್ದರು.
ಜಿದ್ದಾ ಮೂಲಕ ಆಗಮಿಸಿದ ಹಜ್ ಸಮಿತಿಯ ಅಧೀನದಲ್ಲಿರುವ ಯಾತ್ರಾರ್ಥಿಗಳು ಈಗ ಮದೀನಾ ರೌಳಾ ಸಂದರ್ಶನ ಪೂರ್ಣಗೊಳಿಸಬೇಕಾಗಿದೆ. ಮಂಗಳವಾರದಿಂದ ಮದೀನಾಕ್ಕೆ ತೆರಳಲಿದ್ದಾರೆ. ಎಂಟು ದಿನಗಳ ಕಾಲ ಮದೀನಾದಲ್ಲಿ ತಂಗುವ ಮೂಲಕ ಸಂದರ್ಶನ ಪೂರ್ಣಗೊಳ್ಳಲಿದೆ. ಬಳಿಕ ಮದೀನಾ ವಿಮಾನ ನಿಲ್ದಾಣದ ಮೂಲಕ ತಾಯ್ನಾಡಿಗೆ ಮರಳಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್