ರಿಯಾದ್: ಹಜ್ ಯಾತ್ರೆ ಮುಗಿಸಿ ಮನೆಗೆ ಮರಳುವ ಯಾತ್ರಾರ್ಥಿಗಳಿಗೆ 20 ಲಕ್ಷ ಖುರ್ಆನ್ ಪ್ರತಿಗಳನ್ನು ವಿತರಿಸಲಾಗುತ್ತಿದೆ.ದೊರೆ ಸಲ್ಮಾನ್ ಅವರ ಆದೇಶದಂತೆ, ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಇಲಾಖೆಯು ಈ ಖುರ್ಆನ್ ಗಳನ್ನು ಸಿದ್ಧಪಡಿಸಿದೆ. ಇವುಗಳನ್ನು ದೇಶದ ವಿವಿಧ ಗಡಿ ದ್ವಾರಗಳಲ್ಲಿ ಯಾತ್ರಾರ್ಥಿಗಳಿಗೆ ವಿತರಿಸಲಾಗುತ್ತದೆ.
77 ಭಾಷೆಗಳಲ್ಲಿ ಖುರ್ಆನ್ ಅನುವಾದಗಳನ್ನು ಯಾತ್ರಿಕರಿಗೆ ವಿತರಿಸಲಾಗುತ್ತದೆ. ಇದಕ್ಕಾಗಿ ಧಾರ್ಮಿಕ ವ್ಯವಹಾರಗಳ ಇಲಾಖೆ ಕೌಂಟರ್ಗಳ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಪ್ರತಿ ವರ್ಷ ಹಜ್ಗೆ ಬರುವ ಎಲ್ಲಾ ವಿದೇಶಿ ಯಾತ್ರಾರ್ಥಿಗಳಿಗೆ ದೊರೆ ಸಲ್ಮಾನ್ನಿಂದ ಉಡುಗೊರೆಯಾಗಿ ಮುಸ್ಹಫ್ ಮತ್ತು ಖುರ್ಆನ್ ಅನುವಾದಗಳನ್ನು ವಿತರಿಸಲಾಗುತ್ತದೆ. ಇವುಗಳನ್ನು ಮದೀನಾದಲ್ಲಿರುವ ಕಿಂಗ್ ಫಹದ್ ಖುರ್ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ನಲ್ಲಿ ಮುದ್ರಿಸಲಾಗಿದೆ.
ಹಜ್ ಯಾತ್ರೆ ಮುಗಿಸಿದ ಭಾರತೀಯ ಯಾತ್ರಿಕರ ವಾಪಸಾತಿ ಸೋಮವಾರದಿಂದ ಆರಂಭವಾಗಿದೆ. ಜಿದ್ದಾದಿಂದ ದೆಹಲಿ, ಕೋಲ್ಕತ್ತಾ, ಲಕ್ನೋ ಮತ್ತು ಜೈಪುರಕ್ಕೆ ಮೊದಲ ಬ್ಯಾಚ್ ಹೊರಟಿದೆ. ಮೊದಲ ದಿನ ಸುಮಾರು ಎರಡು ಸಾವಿರ ಯಾತ್ರಿಕರು ಹೊರಟಿದ್ದರು.
ಜಿದ್ದಾ ಮೂಲಕ ಆಗಮಿಸಿದ ಹಜ್ ಸಮಿತಿಯ ಅಧೀನದಲ್ಲಿರುವ ಯಾತ್ರಾರ್ಥಿಗಳು ಈಗ ಮದೀನಾ ರೌಳಾ ಸಂದರ್ಶನ ಪೂರ್ಣಗೊಳಿಸಬೇಕಾಗಿದೆ. ಮಂಗಳವಾರದಿಂದ ಮದೀನಾಕ್ಕೆ ತೆರಳಲಿದ್ದಾರೆ. ಎಂಟು ದಿನಗಳ ಕಾಲ ಮದೀನಾದಲ್ಲಿ ತಂಗುವ ಮೂಲಕ ಸಂದರ್ಶನ ಪೂರ್ಣಗೊಳ್ಳಲಿದೆ. ಬಳಿಕ ಮದೀನಾ ವಿಮಾನ ನಿಲ್ದಾಣದ ಮೂಲಕ ತಾಯ್ನಾಡಿಗೆ ಮರಳಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ