ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪಡೀಲ್ ಬ್ರಾಂಚ್ ಇದರ ವಾರ್ಷಿಕ ಮಹಾಸಭೆಯು ಫೆ.14 ರಂದು ಉಮರ್ ಪಡೀಲ್ ನಿವಾಸದಲ್ಲಿ S Y S ಬ್ರಾಂಚ್ ಅಧ್ಯಕ್ಷ ಬಹು ಆದಂ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಬಹು K H ಅಬ್ದುಲ್ಲಾ ಮುಸ್ಲಿಯಾರ್ ದುಆ ನೆರವೇಸಿದರು. ಅಬ್ಬಾಸ್ ಹಾರಾಡಿ ಸ್ವಾಗತಿಸಿದರು ವರದಿ ಮತ್ತು ಲೆಕ್ಕಪತ್ರವನ್ನು ಫಾರುಕ್ ಪಡೀಲ್ ಮಂಡಿಸಿದರು. ಚುನಾವಣೆ ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ಕಾರ್ಯದರ್ಶಿ ಸ್ವಾಲಿಹ್ ಮುರ K M J ಸಮಿತಿಯ ಅಯ್ಕೆ ಪ್ರಕ್ರಿಯೆಗೆ ನಾಯಕತ್ವ ನೀಡಿದರು.
K M J ಪಡೀಲ್ ಬ್ರಾಂಚ್
ನೂತನವಾಗಿ ಅಸ್ಥಿತ್ವಕ್ಕೆ ಬಂದ K M J ಅಧ್ಯಕ್ಷರಾಗಿ. ಆದಂ ಹಾಜಿ ಪಡೀಲ್, ಉಪಾಧ್ಯಕ್ಷರಾಗಿ. ಕುಂಞಹ್ಮದ್ ಹಾಜಿ, ಸುಲೈಮಾನ್ ಜಿಂಧಗಿ,
ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಮ್ಯಾನೇಜರ್, ಜೊತೆ ಕಾರ್ಯದರ್ಶಿಯಾಗಿ
ಕಮರುದ್ದೀನ್ ಹಾಗು ಸಾಹುಲ್ ಹಮೀದ್.
ಕೋಶಾಧಿಕಾರಿಯಾಗಿ, ಫಾರೂಕ್ ಸುಪಾರಿ ಪಡೀಲ್.
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇತರ 10 ಮಂದಿ ಸದಸ್ಯರನ್ನು ಅಯ್ಕೆ ಮಾಡಲಾಯ್ತು.







