ಮಹಾರಾಷ್ಟ್ರ ನಾಂದೇಡ್ ಸಿಟಿಯಲ್ಲಿ ಸುಮಾರು 200 ರಷ್ಟು ಮಸೀದಿಗಳಲ್ಲಿ ಸುಮಾರು 50 ಮಸೀದಿಗಳು ಮಾತ್ರ ಅಹ್ಲುಸುನ್ನಃದ ಆದರ್ಶದಲ್ಲಿ ಕಾರ್ಯಚರಿಸುತ್ತಿದೆ. ಉಳಿದವುಗಳು ನೂತನವಾದಿಗಳ ಕೇಂದ್ರವಾಗಿ ಮಾರ್ಪಟ್ಟಿದೆ.
ಸುಮಾರು 850 ವರ್ಷಗಳ ಇಸಹಾಸವಿರುವ
ಹಝ್ರತ್ ಶಾಯೇ ಕಾಮಿಲ್ ದಾದ ರಹ್ಮತುಲ್ಲಾಹ್ (ಖುತುಬೇ ನಾಂದೇಡ್) ರವರ ದರ್ಗಾದ ಪರಿಸರದಲ್ಲಿ ಸಂಗಮಿಸಿದ
ಮಹಾರಾಷ್ಟ್ರ ಸ್ಟೇಟ್’ ಸುನ್ನಿ ಜಂಇಯತುಲ್ ಮುಅಲ್ಲಿಮೀನ್ SJM ಇದರ ಸ್ಟೇಟ್ ಪ್ರತಿನಿಧಿ ಸಮ್ಮೇಳನ ಕಳೆದ ವರ್ಷನಡೆದಿತ್ತು. ಈ ವೇಳೆ, ಅಲ್ಲಿನ ಉಲಮಾ, ಉಮರಾಗಳು ಒಕ್ಕೊರಲಿನ ತೀರ್ಮಾನದಂತೆ ಗತಕಾಲದ ಅಹ್ಲುಸುನ್ನದ ವೈಭವವನ್ನು ಮರಳಿ ಪಡೆಯಲು ಬೇಕಾದ ಎಲ್ಲಾ ರೀತಿಯ ಕೆಲಸ ಕಾರ್ಯಕ್ಕೆ ಮುಂದಾಗಿ ಅದರ ಪ್ರಥಮ ಹಂತವಾಗಿ ತೈಬಾ ಎಜುಕೇಶನಲ್ ಸೆಂಟರ್ ಎಂಬ ಹೆಸರಿನೊಂದಿಗೆ ಮೊಡೆಲ್ ಮದ್ರಸ 1/1/23 ರಂದು ಚಾಲನೆ ನೀಡಲಾಯಿತು.
ಇಂಗ್ಲಿಷ್ ಮೀಡಿಯಂ ಸ್ಕೂಲ್ , ದ’ಅ್ ವಾ ಕಾಲೇಜು ,ಮಹಿಳಾ ಶರೀಅತ್, ಮೊಹಲ್ಲ ಮದ್ರಸಗಳು ನಡೆಸಲು ತೀರ್ಮಾನಿಸಲಾಗಿದೆ. ಜೊತೆಗೆ 3 ದಿನಗಳಲ್ಲಿ ನಡೆದ ನಾಂದೇಡ್ ಜಿಲ್ಲಾ ಮಟ್ಟದ ಟ್ರೈನಿಂಗ್ ಕ್ಯಾಂಪ್’ ಉಲಮಾಗಳಿಂದ ತುಂಬಿ ತುಳುಕಿತ್ತು .
ಇಸ್ಲಾಮಿಕ್ ಎಜುಕೇಷನ್ ಬೋರ್ಡ್ ಆಫ್ ಇಂಡಿಯಾ (IEB) ನ್ಯಾಷನಲ್ ಟ್ರೈನೆರ್, ಅಸ್ಸುನ್ನಃ ಎಜು & ಚಾರಿಟಿ ಇದರ ಚೇರ್ಮನ್ ಉವೈಸಿ ಮನ್ಝರಿ ಹುಬ್ಬಳ್ಳಿಯವರು ನೇತ್ರತ್ವದಲ್ಲಿ ನಡೆದ ಟ್ರೇನಿಂಗ್ ಕ್ಯಾಂಪ್ ಆವೇಶಭರಿತವಾಗಿತ್ತು.
ಮೂರು ದಿನಗಳಲ್ಲಿ ನಡೆದ ಕ್ಯಾಂಪ್’ನ ಫಲವಾಗಿ ಅಲ್ಲಿ ಸೇರಿದ ಎಲ್ಲಾ ಉಲಾಮಾಗಳು ತಮ್ಮ ಮೊಹಲ್ಲಗಳಲ್ಲಿ IEB ಸಿಲೆಬಸ್ ಅನುಸಾರ ಮದ್ರಸ ಆರಂಭಿಸುವ ಪ್ರತಿಜ್ಞೆ ಕೈಗೊಂಡಿದ್ದಾರೆ.
ಈ ಎಲ್ಲಾ ಕಾರ್ಯಗಳು ನಾಂದೇಡ್ ಜಿಲ್ಲಾ ಸುನ್ನಿ ಜಂಇಯತುಲ್ ಮುಅಲ್ಲಿಮೀನ್ ಅಧೀನದಲ್ಲಿ ,ದಾರುಲ್ ಹಬೀಬ್ ರಾಜಾಪೂರ್ ಸಾರಥಿ ಮೌಲಾನ ಮುಫ್ತಿ ಶರೀಫ್ ನಿಝಾಮಿ ರಾಜಾಪೂರ್ ಮೇಲ್ನೋಟದಲ್ಲಿ ಮೌಲಾನ ಉವೈಸ್ ಮನ್ಝರಿ ಉಸ್ತಾದರ ನೇತ್ರತ್ವದಲ್ಲಿ ನಡೆಯಿತು.
✍️ಹನೀಫ್ ಸಖಾಫಿ ಹುಬ್ಬಳ್ಳಿ

















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ