janadhvani

Kannada Online News Paper

ಕೆಸಿಎಫ್ ಕುವೈಟ್ ಸೌತ್ ಝೋನ್: ಹಿಜರಿ ಸಂದೇಶ ಕಾರ್ಯಕ್ರಮ ಹಾಗೂ ಆತ್ಮೀಯ ಸಂಗಮ

ಹಿಜರಿ ಇಸ್ಲಾಂ ಚರಿತ್ರೆಯ ಮೈಲುಗಲ್ಲು

ಕೆಸಿಎಫ್ ಕುವೈತ್ ಸೌತ್ ಝೋನ್ ವತಿಯಿಂದ ಹಿಜರೀ ಸಂದೇಶ ಕಾರ್ಯಕ್ರಮವು ಜು.29 ರಂದು ಮೆಹಬೂಲದಲ್ಲಿ ಸೌತ್ ಝೋನ್ಅಧ್ಯಕ್ಷ ಜನಾಬ್ sm ಉಮರಬ್ಬ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷ ಬಹುಮಾನ್ಯ ಬಾದುಶಾ ಸಖಾಫಿಯವರ ಪ್ರಾರ್ಥನೆಯೊಂದಿಗೆ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು: ಹುಸೈನ್ ಎರ್ಮಾಡ್ ರವರು ಉದ್ಘಾಟಿಸಿದರು.

ಸೌತ್ ಝೋನ್ ಕಾರ್ಯದರ್ಶಿ ಮುನೀರ್ ಕಾರ್ಕಳ ರವರು ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಅಧ್ಯಕ್ಷ ಬಹುಮಾನ್ಯ ಬಾದುಶಾ ಸಖಾಫಿ ಉಸ್ತಾದ್ ಹಾಗೂ ಮೆಹಬುಲ ಸೆಕ್ಟರ್ ಶಿಕ್ಷಣ ಅಧ್ಯಕ್ಷರಾದ ಬಹುಮಾನ್ಯ ಅಶ್ರಫ್ ಸಖಾಫಿ ಉಸ್ತಾದ್ ಮತ್ತು ರಾಷ್ಟ್ರೀಯ ಸಮಿತಿಯ ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರಾದ ಬಹುಮಾನ್ಯ ಸಾಹುಲ್ ಹಮೀದ್ ಸಅದಿ ಝುಹುರಿ ಆಶಂಸ ಭಾಷಣ ಮಾಡಿದರು.

ಅದೇ ರೀತಿ ಹಿಜರಿ ಸಂದೇಶ ಭಾಷಣವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನಾ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹುರಿ ಉಸ್ತಾದ್ ರವರು ನಿರ್ವಹಿಸಿದರು. ಕೊನೆಯಲ್ಲಿ ಬಹು: ಹುಸೈನ್ ಎರ್ಮಾಡ್ ಉಸ್ತಾದರು ದುವಾ ಮಾಡಿದರು ಹಾಗೂ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿಯ ನಾಯಕರು ಝೋನ್ ನಾಯಕರು ಸೆಕ್ಟರ್ ನಾಯಕರು ಮತ್ತು ಎಲ್ಲಾ ಕೆಸಿಎಫ್ ನ ಸದಸ್ಯರು ಭಾಗವಹಿಸಿದ್ದರು. ಮೆಹಬುಲ ಸೆಕ್ಟರ್ ಕಾರ್ಯದರ್ಶಿ ಜನಾಬ್ ಸಮೀರ್ ಕಮಲಾಪುರ ಧನ್ಯವಾದಗೈದರು.

ವರದಿ ಇಬ್ರಾಹಿಂ ವೇಣೂರು ಪಬ್ಲಿಕೇಶನ್ ವಿಭಾಗ ಕುವೈಟ್