ಮಂಗಳೂರು: ಪ್ರಜಾಪ್ರಭುತ್ವ ದೇಶದಲ್ಲಿ, ಪ್ರಜೆಗಳು ನಿರ್ಧಿಷ್ಟ ಭಕ್ಷಣ ಸೇವಿಸಬೇಕು, ನಿರ್ಧಿಷ್ಟ ಉಡುಪು ಧರಿಸಬೇಕು, ನಿರ್ಧಿಷ್ಟ ರೀತಿಯಲ್ಲಿಯೇ ಆಹಾರ ತಯಾರಿ ನಡೆಸಬೇಕು ಎಂದು ಫರ್ಮಾನು ಹೊರಡಿಸಲು ನಾವು ಕೊಲೊನಿಯಲ್ ಸಾಮ್ರಾಜ್ಯದಲ್ಲಿ ಜೀವಿಸುತ್ತಿಲ್ಲ.
ವಿವಿಧತೆ ಯಲ್ಲಿ ಏಕತೆ ಪ್ರತಿಪಾದಿಸಿದ ಡಾ.ಅಂಬೇಡ್ಕರ್, ನಾರಾಯಣ ಗುರು ಸ್ವಾಮಿ, ಸ್ವಾಮಿ ವಿವೇಕಾನಂದರು, ಬಸವಣ್ಣ, ತಿರುವಳ್ಳುವರ್, ಮಹಾತ್ಮ ಜ್ಯೋತಿ ಭಾಪುಳೆ , ಮಹಾತ್ಮ ಗಾಂಧಿ, ದೇವರಾಜ ಅರಸು ಅವರಂತಹ ಸಾಮಾಜಿಕ ಹೋರಾಟಗಾರರು ಜೀವಿಸಿದ ನೆಲದಲ್ಲಿ ಬದುಕುತ್ತಿದ್ದೇವೆ. ಭಾರತದ ಮೂಲ ನಿವಾಸಿಗಳು ನಿಸರ್ಗ ಲಭ್ಯ ಆಹಾರ ಸೇವಿಸಿ ಉತ್ತಮ ನಾಗರಿಕ ಬದುಕು ರೂಪಿಸಲು ನಮಗೆ ಕಲಿಸಿ ಕೊಟ್ಟಿದ್ದಾರೆ. ಜನರು ಹಸಿವು ನೀಗಿಸಲು ಯಾವ ಆಹಾರ , ಹೇಗೆ ತಯಾರಿಸಬೇಕು ಎಂದು ಆರ್ಯರಿಂದ ಕಲಿತು ಕೊಳ್ಳುವ ಗತಿಗೇಡು ನಾಡಿನ ಮಣ್ಣಿನ ನಾಗರಿಕರಿಗೆ ಬರಲಿಲ್ಲ.
ಆದುದರಿಂದ ಭಾರತದ ಮುಸ್ಲಿಮರು ಹುಟ್ಟಿನಿಂದ ಸಾಯುವವರೆಗೆ ಹಲಾಲ್ ಗೊಳಿಸಿದ ಶುದ್ಧ ಆಹಾರ, ಮಾಂಸ, ಕೋಳಿ, ಕೋಣಗಳನ್ನು ಭಕ್ಷಿಸಲಿದ್ದಾರೆ. ಮತ್ತು ತಮ್ಮ ಆರೋಗ್ಯವನ್ನು ಸಮರ್ಥವಾಗಿ ಸಂರಕ್ಷಿಸಲು ಬದ್ಧರು. ಈ ಬಗ್ಗೆ ಇತರರು ಚಿಂತಿಸುವ ಅಗತ್ಯವಿಲ್ಲ. ಮುಸ್ಲಿಮರ ಆಹಾರ ಪದ್ಧತಿಯನ್ನು ಇತರರು ನಿರ್ಧರಿಸುವ ವ್ಯರ್ಥ ಹೊಣೆಗಾರಿಕೆ ಕೂಡಾ ಇತರರಿಗೆ ಅಗತ್ಯ ವಿಲ್ಲ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ