ಮಂಗಳೂರು :ಗುರುಪುರ- ಕೈಕಂಬ ಪರಿಸರದ ಸರಿ ಸುಮಾರು 50 ಕ್ಕೂ ಮಿಕ್ಕ ಮೊಹಲ್ಲಾಗಳು ಮತ್ತು ಸರ್ವ ಮುಸ್ಲಿಂ ಸಂಘಟನೆ ಗಳನ್ನೊಳಗೊಂಡ ಒಕ್ಕೂಟವಾಗಿದೆ ಸಂವಿಧಾನ ಸಂರಕ್ಷಣಾ ವೇದಿಕೆ. ಪ್ರಸ್ತುತ ಸಮಿತಿಯ ವತಿಯಿಂದ ಹಿಜಾಬ್ ಶರೀಅತ್ ವಿರೊಧಿ ನಡೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಬ್ರಹತ್ ಸಮಾಲೋಚನಾ ಸಭೆಯು ಗಂಜಿಮಠ ಝರಾ ಕನ್ವೆನ್ಶನ್ ನಲ್ಲಿ ಸಮಿತಿ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಇಂಜಿನಿಯರ್ ಬಜ್ಪೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸದ್ರಿ ಸಭೆಯಲ್ಲಿ 50 ಮೊಹಲ್ಲಾದ ಖತೀಬರು , ಅಧ್ಯಕ್ಷರು , ಪ್ರಧಾನ ಕಾರ್ಯದರ್ಶಿಗಳು ಹಾಗೂ ಮುಸ್ಲಿಂ ಜನ ಪ್ರತಿನಿಧಿಗಳು ,ಸಮಿತಿಯ ಕೇಂದ್ರ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಸರ್ವ ಮುಸ್ಲಿಂ ಸಂಘಟನೆಗಳ ನಾಯಕರು ,ಮತ್ತು ಸಮಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಯ ನಾಯಕರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಕುಪ್ಪೆಪದವು ಕೇಂದ್ರ ಜುಮಾ ಮಸ್ಜಿದ್ ನ ಖತೀಬರೂ ಆದ K.H.U ಶಾಫಿ ಮದನಿ ಕರಾಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.







