janadhvani

Kannada Online News Paper

ಸಮಸ್ಯೆಗಳನ್ನು ಪರಿಹರಿಸುವ ಸಮುದಾಯ ನಮ್ಮದು- ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವದಲ್ಲಿ ಯು.ಟಿ.ಖಾದರ್

ಮಂಗಳೂರು : ಸಮಸ್ಯೆಗಳನ್ನು ಸೃಸ್ಟಿಸಿ ಬೆಂಕಿಯಿಡುವ ಕೆಲಸ ಮಾಡುವವರಲ್ಲ, ಹೊರತು ಪರಿಹಾರಗಳನ್ನು ಹುಡುಕುವ ಸಮುದಾಯವಾಗಿದೆ ನಮ್ಮ ಸಮುದಾಯ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಸುರತ್ಕಲ್ ನ ಕೃಷ್ಣಾಪುರದ ಶಾಲಾ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ನ ರಾಜ್ಯ ಮಟ್ಟದ ಪ್ರತಿಭೋತ್ಸವದ ಗಣ್ಯರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರತಿಭೋತ್ಸವ ಸ್ಥಳೀಯ ಸ್ವಾಗತ ಸಮಿತಿಯ ಚಯರ್ಮ್ಯಾನ್ ಬಿ.ಯಂ ಮುಮ್ತಾಜ್ ಅಲಿಯವರು ಅಧ್ಯಕ್ಷತೆ ವಹಿಸಿದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಎಮ್.ಫಾರೂಖ್, ಮಾಜಿ ಶಾಸಕ ಮೊಯ್ದೀನ್ ಬಾವ, ಮಾತನಾಡಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಹಾಮೀಂ ತಂಙಳ್, ಮದಕ ತಂಙಳ್, ಅಬೂಸುಫ್ಯಾನ್ ಮದನಿ, ಅಬ್ದುಲ್ ಜಲೀಲ್ ಮೋಂಟುಗೋಳಿ,ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಸುಫ್ಯಾನ್ ಸಖಾಫಿ,ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿದರು. ಪ್ರತಿಭೋತ್ಸವ ಚಯರ್ಮೇನ್ ಕೆ.ಎಂ ಮುಸ್ತಫಾ ನ’ಈಮಿ ಹಾವೇರಿ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ಕಾರ್ಯದರ್ಶಿ ಹುಸೈನ್ ಸ’ಅದಿ ಹೊಸ್ಮಾರ್ ವಂದಿಸಿದರು.