janadhvani

Kannada Online News Paper

ಅಬ್ದುರ್ರಹ್ಮಾನ್ ಇಂಜಿನಿಯರ್, ಮಣಿಪಾಲ್ ಉಸ್ತಾದ್, ಅಬ್ದುರಹ್ಮಾನ್ ಉಸ್ತಾದ್ ನಿಧನ: SYS ಸಂತಾಪ

ಉಳ್ಳಾಲ: SSF ಮತ್ತು SYS ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನಾಯಕತ್ವ ನೀಡಿದ್ದ ಡಾಕ್ಟರ್, ಫ್ರೋಫೆಸರ್ ಅಬ್ದುರ್ರಹ್ಮಾನ್ ಇಂಜಿನಿಯರ್, ಕಿನ್ಯ ಕೇಂದ್ರ ಮಸೀದಿಯಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸಿದ್ದ, ಅಬ್ದುರಹ್ಮಾನ್ ಮುಸ್ಲಿಯಾರ್, ಜನಧ್ವನಿಯ ಮಸ್ಊದ್ ಅಲಿ ಕಿನ್ಯಾ ಇವರ ತಂದೆ ಮಣಿಪಾಲ್ ಉಸ್ತಾದ್ ಎಂದು ಖ್ಯಾತರಾಗಿದ್ದ ಅಬ್ದುರಹ್ಮಾನ್ ಮುಸ್ಲಿಯಾರ್ ನಿಧನರಾಗಿದ್ದಾರೆ.

ಇವರ ನಿಧನಕ್ಕ SYS ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿ ಅಧ್ಯಕ್ಷ ರಾದ ಮುಹಮ್ಮದ್ ಅಲೀ ಸಖಾಫಿ, ಅಶ್ಅರಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಕೋಶಾಧಿಕಾರಿ ಎಸ್ ಎಂ ಬಶೀರ್ ಹಾಜಿ ತೀವ್ರ ಸಂತಾಪ ಸೂಚಿಸಿದ್ದಾರೆ.