ಮಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಜನ ಸಾಮಾನ್ಯರು, ಕೆಲಸವಿಲ್ಲದೆ, ವೇತನವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ಕೂಡ ಪರದಾಡುವ ಪರಿಸ್ತಿಥಿಯಲ್ಲಿ ‘ಮೆಸ್ಕಾಂ’ ಹಗಲು ದರೋಡೆ ದಂಧೆಗೆ ಇಳಿದಿರುವುದು ಅಮಾನವೀಯ ಕೃತ್ಯವಾಗಿದೆ.
ಎಪ್ರಿಲ್ ಒಂದು ತಿಂಗಳಲ್ಲಿ ರೀಡಿಂಗ್ ಗೆ ಬಾರದೆ ಮೇ ತಿಂಗಳಿನಲ್ಲಿ ರೀಡಿಂಗ್ ಮಾಡಿ ಎರಡೂ ತಿಂಗಳಲ್ಲಿ ಬಳಸಿದ ಯುನಿಟ್ ಪ್ರಮಾಣವನ್ನು ಒಂದೇ ಬಿಲ್ ನಲ್ಲಿ ನಮೂಧಿಸಿ ಗರಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ಯುನಿಟ್ ಬಳಕೆಗೆ ಈಡು ಮಾಡಲಾಗುವ ಶುಲ್ಕವನ್ನು ಈಡು ಮಾಡುತ್ತಿದೆ.

ಇದರ ವಿರುದ್ಧ ಟ್ವಿಟರ್ ನಲ್ಲಿ ವ್ಯಾಪಕ ಆಕ್ರೊಶ ವ್ಯಕ್ತವಾಗುತ್ತಿದ್ದು, ನಮ್ಮ ಬೆಸ್ಕಾಂ ಪ್ರತಿಕ್ರಿಯೆ ನೀಡಲು ಮುಂದಾಗಿದೆ. ಆದರೆ,ಬಿಲ್ ನಲ್ಲಿ ಯಾವುದೇ ಬದಲಾವಣೆಗೂ ಸಿದ್ಧವಿಲ್ಲದೆ, ಯಾವುದೇ ಪ್ರತಿಕ್ರಿಯೆಗೂ ಮುಂದಾಗದೆ ಮೆಸ್ಕಾಂ ಮೌನ ತಾಳಿದ್ದು, ಗ್ರಾಹಕರನ್ನು ಮತ್ತಷ್ಟು ಕೆರಳಿಸಿದೆ.
ಲಾಕ್ಡೌನ್ ಪೂರ್ವ 2 ತಿಂಗಳ ಬಿಲ್ ಗಿಂತ ನಂತರದ 2 ತಿಂಗಳ ಬಿಲ್ ನಲ್ಲಿ ಮೂರು ಪಟ್ಟು ಹೆಚ್ಚು ಶುಲ್ಕ ನಮೂದಿಸಲಾಗಿದೆ, ಹೊರತಾಗಿ ಇತರ ಬಾಬ್ತಿನಲ್ಲೂ ಶುಲ್ಕ ಹಾಕಲಾಗಿದೆ. ಒಟ್ಟಿನಲ್ಲಿ ಜನಸಾಮಾನ್ಯರ ಕಿಸೆಗೆ ಕತ್ತರಿ ಹಾಕಿ ಹಗಲು ದರೋಡೆಗೆ ಮುಂದಾಗಿರುವ ಮೆಸ್ಕಾಂ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಪರಿಹಾರ ಕಂಡುಕೊಳ್ಳುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.
ಕೋವಿಡ್ ಪರಿಹಾರ ನಿಧಿಯಿಂದ ಜನಸಾಮಾನ್ಯರ ವಿದ್ಯುತ್ ಬಿಲ್ಲನ್ನಾದರೂ ಮನ್ನಾ ಮಾಡಲು ಸರಕಾರ ಮುಂದಾಗಬೇಕಾಗಿ ಸಾಮಾಜಿಕ ತಾಣದಲ್ಲಿ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ.
ವಿದ್ಯುತ್ ಬಿಲ್ ಹೆಚ್ಚಳ, ಟ್ವಿಟರ್ ನಲ್ಲಿ ಟ್ರೆಂಡಿಂಗ್, ಪ್ರತಿಕ್ರಿಯಿಸಿದ ನಮ್ಮ ಬೆಸ್ಕಾಂ
















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ