janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಮೂಡುಬಿದಿರೆ ಝೋನ್- ನೂತನ ಸಮಿತಿ ಅಸ್ತಿತ್ವಕ್ಕೆ

ಮೂಡುಬಿದಿರೆ: ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಝೋನ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 08 ಎಪ್ರಿಲ್ 2025 ನೇ ಮಂಗಳವಾರ ಸುನ್ನೀ ಸೆಂಟರ್ ಬಜಪೆಯಲ್ಲಿ ಸಭಾಧ್ಯಕ್ಷರಾದ ಬದ್ರುದ್ದೀನ್ ಹಾಜಿಯವರ ನೇತೃತ್ವದಲ್ಲಿ ನಡೆಯಿತು.

ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಝೋನ್ ಜೊತೆ ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳ್ಳಾಲ ಅವರು ಕಿರಾಅತ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಮೂಡಬಿದ್ರೆ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಮದನಿ ಗುಂಡುಕಲ್ಲು ಸ್ವಾಗತಿಸಿ, ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ವಾಚಿಸಿದರು.

ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಆಶ್ರಫ್ ಸ‌ಅದಿ ಮಲ್ಲೂರು ಉಸ್ತಾದರು ಸಂಘಟನೆ ತರಗತಿ ನಡೆಸಿದರು.ವೀಕ್ಷಕರಾದ ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ರಹೀಮ್ ಸ‌ಅದಿ ಕತ್ತರ್ ಹಾಗೂ ಕರ್ನಾಟಕ ಮುಸ್ಲಿಮ್ ಜಮಾಅತ್ ದ.ಕ ಜಿಲ್ಲಾ ವೆಸ್ಟ್ ಜೊತೆ. ಕಾರ್ಯದರ್ಶಿ ಇಸ್ಮಾಯಿಲ್ ಕಿನ್ಯ ಅವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು – ಬದ್ರುದ್ದೀನ್ ಹಾಜಿ ಜರಿನಗರ ಬಜಪೆ, ಉಪಾಧ್ಯಕ್ಷರು – ಸಿತಾರ್ ಮಹಮ್ಮದ್ ಹಾಜಿ ಕೈಕಂಬ, ಪ್ರಧಾನ ಕಾರ್ಯದರ್ಶಿ – ಅಬ್ದುಲ್ ಸಲಾಂ ಮದನಿ ಗುಂಡುಕಲ್ಲು, ಕೋಶಾಧಿಕಾರಿ – ಬಶೀರ್ ಗಾಣೆಮಾರ್ ಅಮ್ಮುಂಜೆ, ದಅವಾ ಕಾರ್ಯದರ್ಶಿ – ಶಾಫಿ ಮಾಸ್ಟರ್ ಬಜಪೆ, ಮೀಡಿಯಾ ಕಾರ್ಯದರ್ಶಿ – ಅಬ್ದುಲ್ ಲತೀಫ್ (ಉಳ್ಳಾಲ) ಕೆರೆಬಳಿ, ಇಸಾಬಾ ಕಾರ್ಯದರ್ಶಿ – ರಮಳಾನ್ ಸಚ್ಚರಿಪೇಟೆ, ಚಾರಿಟಿ ಕಾರ್ಯದರ್ಶಿ – ಶೇಕ್ ಮಹಮ್ಮದ್ ಕೈಕಂಬ, ಸಾಂತ್ವನ ಸೇವಕ ಕಾರ್ಯದರ್ಶಿ – ಹನೀಫ್ ಮಫಾಝ್ ಮೂಡುಬಿದಿರೆ, ಸಂಘಟನೆ ಕಾರ್ಯದರ್ಶಿ – ಮನ್ಸೂರ್ ಬಜಪೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಸನ್ ಮದನಿ ಕೈಕಂಬ, ಸುಲೈಮಾನ್ ಹಾಜಿ ಬಜಪೆ, ಅಬ್ದುಲ್ ಹಮೀದ್ ಸೂರಲ್ಪಾಡಿ, ಇಸ್ಮಾಯಿಲ್ ಮುಸ್ಲಿಯಾರ್ ಬಡಕಬೈಲ್, ಹನೀಫ್ ಉದ್ದಬೆಟ್ಟು
ಮಹಮ್ಮದ್ ಅಮ್ಮುಂಜೆ, ಪಿ.ಹೆಚ್ ಉಸ್ಮಾನ್ ಕೆರೆಬಳಿ, ಉಸ್ಮಾನ್ ಹಾಜಿ ಬಾಂಬೈ ಮೂಡಬಿದ್ರೆ, ಮಹಮ್ಮದ್ ಕೆ ಮಾವಿನಕಟ್ಟೆ, ಅಬ್ದುಲ್ ರಝಾಕ್ ಮಾವಿನಕಟ್ಟೆ,‌ ಝೋನ್ ಎಸ್ ವೈ ಎಸ್ ಅದ್ಯಕ್ಷರು /ಪ್ರ ಕಾರ್ಯದರ್ಶಿ
ಡಿವಿಜನ್ ಎಸ್ ಎಸ್ ಎಫ್ ಅಧ್ಯಕ್ಷರು/ ಪ್ರ ಕಾರ್ಯದರ್ಶಿ

ಪ್ರಕಟಣೆ :
🖊️ಅಬ್ದುಲ್ ಲತೀಫ್ ಉಳ್ಳಾಲ
(ಮೀಡಿಯಾ ಕಾರ್ಯದರ್ಶಿ ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ)