ಬುರೈದ : ಬೆಳ್ತಂಗಡಿ ತಾಲೂಕು ನಾವೂರು ನಿವಾಸಿ ಬುರೈದದಲ್ಲಿ ಉದ್ಯೋಗದಲ್ಲಿರುವ ಹೈದರ್ ಎಂಬವರ 2 ವರ್ಷ ಪ್ರಾಯದ ಗಂಡು ಮಗು ಮುಹಮ್ಮದ್ ಅಬ್ಯಾನ್ ಆದಿತ್ಯವಾರ ಅಲ್ಲಾಹುವಿನ ಅನುಲಂಘನೀಯ ವಿಧಿಗೆ ವಿದೇಯವಾಗಿ ಬುರೈದ ಸೆಂಟ್ರಲ್ ಹಾಸ್ಪಿಟಲ್ ನಲ್ಲಿ
ಮರಣ ಹೊಂದಿತು.
ತಕ್ಷಣ ಊರಿನಿಂದ ಮೃತರ ಬಂಧುಗಳು KCF ಅಲ್ ಕಸೀಮ್ ಝೋನ್ ನಾಯಕರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ನಾಯಕರಾದ ಯಾಕೂಬ್ ಸಖಾಫಿ , ತಾಜುದ್ದೀನ್ ಕೆಮ್ಮಾರ , ಅಬ್ದುಲ್ ಖಾದರ್ ಕಣ್ಣಂಗಾರ್ , ಸಮಾಜ ಸೇವಕ ಲತೀಫ್ ಶೇರಿ ನೇತೃತ್ವದ ತಂಡವು ತಕ್ಷಣ ಆಸ್ಪತ್ರೆಗೆ ತೆರಳಿ ಮೃತ ಮಗುವಿನ ತಂದೆ , ಹಾಗೂ ಕುಟುಂಬಸ್ಥರನ್ನು ಕಂಡು ಸಾಂತ್ವನವನ್ನು ಹೇಳಿ , ಮಗುವಿನ ದಫನ ಕಾರ್ಯಕ್ಕೆ ಬೇಕಾಗುವ ಎಲ್ಲಾ ದಾಖಲೆ ಪತ್ರವನ್ನು KCF ಅಲ್ ಕಸೀಮ್ ಸಾಂತ್ವನ ಇಲಾಖೆ ನೇತೃತ್ವವು ತಕ್ಷಣ ಸರಿ ಪಡಿಸಿ 4-03-2025 ನೇ ಮಂಗಳವಾರ ಸಂಜೆ ಬುರೈದ ಹಯ್ಯಲ್ ಕಲೀಜ್ ಮಸೀದಿ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.
ಮೃತ ಮಗುವಿನ ಕುಟುಂಬಸ್ಥರು, KCF ಕಾರ್ಯಕರ್ತರು , ಮಂಗಳೂರು ಮೂಲದ ಪ್ರವಾಸಿ ಸಹೋದರರು ದಫನ ಕಾರ್ಯದಲ್ಲಿ ಪಾಲ್ಗೊಂಡರು.
ಸಾಂತ್ವನ ಇಲಾಖೆ
ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಅಲ್ ಕಸೀಮ್ ಝೋನ್
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ