ಖ್ಯಾತ ಉದ್ಯಮಿಯಾಗಿ ಕರಾವಳಿಯ ಹೆಮ್ಮೆಯ ಯುವ ಮುಂದಾಳುವಾಗಿರುವ ಸಮಾಜ ಸೇವಕ, ಕಾರುಣ್ಯ ಕರುಣಾಳು ಅಬ್ದುಲ್ಲತೀಫ್ ಗುರುಪುರ ಅವರಿಗೆ ‘ಕರುನಾಡ ಸೌಹಾರ್ದ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾನ್ಯ ಲತೀಫ್ ಗುರುಪುರ ಅವರು ಅನಿ ಟ್ರೇಡಿಂಗ್ ಕಂಪೆನಿ ಸ್ಥಾಪಿಸಿ ಅದರಲ್ಲಿ ಯಶಸ್ವಿಯಾಗಿ ಹಲವಾರು ಮಂದಿಗೆ ಉದ್ಯೋಗವಕಾಶ ಕಲ್ಪಿಸಿ ಕೊಟ್ಟುದಲ್ಲದೆ ಬಡ ಹೆಣ್ಮಕ್ಕಳ ಮದುವೆ, ಬಡವರಿಗೆ ದಿನಸಿ ಕಿಟ್, ರಮಝಾನ್ ಕಿಟ್ ಹಾಗೂ ಆರ್ಥಿಕ ಸಹಾಯವನ್ನು ನೀಡುತ್ತಾ ಬರುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಧರ್ಮಜಾತಿ ಬೇಧಮನ್ಯೆ ಅಪಾರ ಕುಟುಂಬಗಳಿಗೆ ಆಸರೆಯಾಗಿದ್ದರು.
ಬಹುಮುಖ ಸೇವೆಗಳಿಂದ ಜನಾನುರಾಗಿಯಾಗಿ ಸುಖ್ಯಾತರಾದ ಲತೀಫ್ ಗುರುಪುರ ಅವರ ಈ ಸೇವೆಗಳನ್ನು ಗುರುತಿಸಿ ಇದೇ ಡಿಸೆಂಬರ್ 26 ರಂದು ಪುತ್ತೂರಿನ ಸುದಾನ ಮೈದಾನದಲ್ಲಿ ನಡೆದ ನೂರೇ ಅಜ್ಮೀರ್ ಹಾಗೂ ‘ಮಾದಕತೆ ಮಾರಣಾಂತಿಕ’ ಎಂಬ ವಿಶೇಷ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಸೇರಿದ್ದ ದಶಸಹಸ್ರ ಸಂಖ್ಯೆಯ ಜನಸ್ತೋಮದಲ್ಲಿ ರಾಜ್ಯಮಟ್ಟದ ಗಣ್ಯರ ಉಪಸ್ಥಿಯೊಂದಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಹಿಂದೂಸ್ಥಾನ್ ಗೋಲ್ಡ್ ಕಂಪೆನಿ ಮಾಲಕರಾದ ಸಿ.ಕೆ. ಮೌಲಾ ಶರೀಫ್, ಖ್ಯಾತ ಉದ್ಯಮಿ ವೆಂಕಟೇಶ್ ಬೆಂಗಳೂರು ಮುಂತಾದ ಗಣ್ಯಾತಿ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ