ಅಬುಧಾಬಿ: ದಾಖಲೆಗಳಿಲ್ಲದೆ ದೇಶದಲ್ಲಿ ವಾಸಿಸುವ ಕಾನೂನು ಉಲ್ಲಂಘಕರಿಗೆ ಯುಎಇ ಘೋಷಿಸಿರುವ ಕ್ಷಮಾದಾನ ಇಂದು ಕೊನೆಗೊಳ್ಳಲಿದೆ. ಕ್ಷಮಾದಾನದ ಅಂತ್ಯಗೊಳ್ಳುವುದರೊಂದಿಗೆ,ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ತಪಾಸಣೆಯು ಆರಂಭಗೊಳ್ಳಲಿದೆ. ದುಬೈ ಒಂದರಲ್ಲೇ 2,36,000 ಮಂದಿ ಕ್ಷಮಾದಾನ ಅವಕಾಶವನ್ನು ಬಳಸಿಕೊಂಡಿದ್ದಾರೆ.55,000 ಕ್ಕೂ ಹೆಚ್ಚು ಜನರು ದೇಶವನ್ನು ತೊರೆದರು ಮತ್ತು ಉಳಿದವರು ದಾಖಲೆಗಳನ್ನು ಸರಿಪಡಿಸಿ, ಹೊಸ ಉದ್ಯೋಗಗಳನ್ನು ಪಡೆದರು. ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸಿದವರಿಗೆ ದುಬೈ ರೆಸಿಡೆನ್ಸಿ ಮತ್ತು ಇಮಿಗ್ರೇಷನ್ ವಿಭಾಗದ (ಜಿಡಿಆರ್ಎಫ್ಎ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಹ್ಮದ್ ಅಲ್ ಮರ್ರಿ ಧನ್ಯವಾದ ಅರ್ಪಿಸಿದರು. ದಾಖಲೆಗಳನ್ನು ಸರಿಪಡಿಸಬೇಕಾದವರು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಆರಂಭಿಸಿದ, ನಾಲ್ಕು ತಿಂಗಳ ದೀರ್ಘಾವಧಿಯ ಕ್ಷಮಾದಾನವು ಇಂದು ಕೊನೆಗೊಳ್ಳುತ್ತದೆ. ಕ್ಷಮಾದಾನದಲ್ಲಿ ಔಟ್ ಪಾಸ್ ಪಡೆದು ತಾಯ್ನಾಡಿಗೆ ಮರಳುವವರಿಗೆ ವಾಪಸಾಗುವುದಕ್ಕೆ ನಿರ್ಬಂಧವಿಲ್ಲ ಎಂಬುದಾಗಿದೆ ಈ ಬಾರಿಯ ಕ್ಷಮಾದಾನದ ವಿಶೇಷತೆ. 2003, 2007, 2013 ಮತ್ತು 2018 ರಲ್ಲಿ ಯುಎಇ. ಇದೇ ರೀತಿಯ ಕ್ಷಮಾದಾನವನ್ನು ಘೋಷಿಸಿತ್ತು.
ಕ್ಷಮಾದಾನದ ನಂತರ, ದಂಡವು ಹಿಂದಿನಂತೆ ಇರಲಿದೆ. ದಾಖಲೆಗಳನ್ನು ಸರಿಹೊಂದಿಸಲು ಬಯಸುವವರು ಅದನ್ನು ತ್ವರಿತಗೊಳಿಸಲು ಸಲಹೆ ನೀಡಲಾಗಿದೆ. ನಿವಾಸ ದಾಖಲೆಗಳನ್ನು ಕಾನೂನುಬದ್ಧಗೊಳಿಸದವರನ್ನು ಪತ್ತೆಹಚ್ಚಲು ಬುಧವಾರದಿಂದ ಕಟ್ಟುನಿಟ್ಟಿನ ತಪಾಸಣೆ ಪ್ರಾರಂಭಿಸಲಾಗುವುದು ಎಂದು ಜನರಲ್ ಮುಹಮ್ಮದ್ ಅಹ್ಮದ್ ಅಲ್ ಮರ್ರಿ ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು