ದುಬೈ: ದುಬೈನಲ್ಲಿ ಪ್ರವಾಸಿ ಮತ್ತು ಸಂದರ್ಶಕರ ವೀಸಾ ಪಡೆಯಲು ಹೋಟೆಲ್ ಬುಕಿಂಗ್ ದಾಖಲೆಗಳು ಮತ್ತು ರಿಟರ್ನ್ ಟಿಕೆಟ್ ಕಡ್ಡಾಯವಾಗಿದೆ. ಈ ಸಂಬಂಧ ದುಬೈ ಇಮಿಗ್ರೇಷನ್ ಟ್ರಾವೆಲ್ ಏಜೆನ್ಸಿಗಳಿಗೆ ನೋಟಿಸ್ ನೀಡಿದೆ. ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಕ್ಯೂಆರ್ ಕೋಡ್ ಹೊಂದಿರುವ ಹೋಟೆಲ್ ಬುಕಿಂಗ್ ದಾಖಲೆ ಮತ್ತು ರಿಟರ್ನ್ ಟಿಕೆಟ್ನ ನಕಲನ್ನು ಸಲ್ಲಿಸುವುದು ಅಗತ್ಯ. ಇಲ್ಲದಿದ್ದರೆ, ವೀಸಾ ಪ್ರಕ್ರಿಯೆಯು ವಿಳಂಬವಾಗಲಿದೆ. ಈ ಬದಲಾವಣೆಯು ವಿವಿಧ ಉದ್ದೇಶಗಳಿಗಾಗಿ ವಿಸಿಟ್ ವೀಸಾದಲ್ಲಿ ದುಬೈಗೆ ಬರುವ ಅನೇಕ ಜನರ ಮೇಲೆ ಪರಿಣಾಮ ಬೀರಲಿದೆ.
ಇಂತಹ ದಾಖಲೆಗಳನ್ನು ಸಲ್ಲಿಸದವರ ವೀಸಾ ಅರ್ಜಿಗಳು ಮೊಟಕುಗೊಂಡಿದೆ. ವಿಸಿಟ್ ವೀಸಾದಲ್ಲಿ ಬರುವವರಿಗೆ ರಿಟರ್ನ್ ಟಿಕೆಟ್ ಮತ್ತು ನಿವಾಸದ ದಾಖಲೆಗಳು ಮುಂಚಿನಿಂದಲೇ ಕಡ್ಡಾಯವಾಗಿತ್ತು. ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ನಲ್ಲಿ ಕೇಳಿದರೆ ಮಾತ್ರ ಈ ಎರಡು ದಾಖಲೆಯನ್ನು ತೋರಿಸಿದರೆ ಸಾಕಿತ್ತು.. ಆದರೆ ವೀಸಾ ಅರ್ಜಿಯ ಸಮಯದಲ್ಲಿ ಈ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರಲಿಲ್ಲ. ಅದೂ ಅಲ್ಲದೆ, ಕ್ರೆಡಿಟ್/ಡೆಬಿಟ್ ಕಾರ್ಡ್ನಲ್ಲಿ 2 ತಿಂಗಳ ವೀಸಾಗೆ AED 5,000 ಮತ್ತು 1 ತಿಂಗಳ ವೀಸಾಗೆ AED 3,000 ಕಡ್ಡಾಯವಾಗಿದೆ.
ಪ್ರವಾಸಿ ವೀಸಾಗಳಿಗೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು, ವ್ಯಾಪಾರ ಕಂಪನಿಗಳು ವ್ಯಕ್ತಿಗಳು ಮತ್ತು ಕುಟುಂಬಗಳು ಸಂದರ್ಶಕ ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು.ಆದರೆ ಎರಡೂ ವೀಸಾಗಳ ನಿಯಮಗಳು ಮತ್ತು ಷರತ್ತುಗಳು ಒಂದೇ ಆಗಿದೆ. ಏತನ್ಮಧ್ಯೆ, ಯುಎಇಯಲ್ಲಿರುವ ಅನಿವಾಸಿಯೊಬ್ಬರು ತಮ್ಮ ಕುಟುಂಬದ ಪರವಾಗಿ ಸಂದರ್ಶಕ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಹೋಟೆಲ್ ಬುಕಿಂಗ್ ಮತ್ತು ರಿಟರ್ನ್ ಟಿಕೆಟ್ ಅನ್ನು ಸಲ್ಲಿಸಬೇಕೇ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಸಂದರ್ಶಕ ವೀಸಾ ಅವಧಿ ಮುಗಿದಿರುವವರು ನೆರೆಯ ದೇಶಗಳಿಗೆ ಹೋಗಿ ಹೊಸ ಸಂದರ್ಶಕ ವೀಸಾಗಳನ್ನು ಪಡೆಯುವ ಕಾರ್ಯವಿಧಾನಗಳ ಮೇಲೂ ಇದು ಪರಿಣಾಮ ಬೀರಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ