ಹಾಜಿ ಜಿ.ಎಂ. ಹಸನ್ ಕುಂಙಿ ಗಂಗರಮಜಲ್, (ವ್ಯವಸ್ಥಾಪಕರು, ಮಸ್ಜಿದು ತಕ್ವಾ, ತಕ್ವಾ ಅಕಾಡೆಮಿ ಆಫ್ ಇಸ್ಲಾಮಿಕ್ ಎಜುಕೇಶನ್ ಪಂಪ್ ವೆಲ್)
ಮಂಗಳೂರು. ಹಾಜಿ ಬಿ.ಎಮ್ ಮಮ್ತಾಜ್ ಅಲಿ ಅವರು ಸಮಾಜಕ್ಕೆ ಮತ್ತು ಸಮುದಾಯಕ್ಕೆ ಸಮರ್ಪಿಸಿದ ಸೇವೆ ಅನನ್ಯ. ಹಾಜಿ ಬಿ.ಎಮ್ ಮಮ್ತಾಜ್ ಅವರ ಸ್ಥಾನಕ್ಕೆ ಇನ್ನೊಂದು ಮಮ್ತಾಜ್ ಅಲಿ ಅವರು ಹುಟ್ಟಿ ಬರಲು ಸಾಧ್ಯವೇ ಇಲ್ಲ.
ಇವರು ನನ್ನ 26 ವರ್ಷದ ಪರಿಚಿತರು ಸಣ್ಣಪ್ರಾಯದಲ್ಲೇ ಸಮಾಜಕ್ಕೆ ಮತ್ತು ಸಮುದಾಯದ ಏಳಿಗೆಗಾಗಿ ಧುಮುಕಿ ಉನ್ನತ ಸ್ಥಾನಮಾನವನ್ನು ಅಲಂಕರಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಸಮುದಾಯದ ಗೌರವದ ವ್ಯಕ್ತಿಯಾಗಿ ಶೈಕ್ಷಣಿಕ,ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಗ್ರಗಣ್ಯ ನೇತಾರರಾಗಿ ಹಸಿದವರಿಗೆ ಮತ್ತು ರೋಗಿಗಳಿಗೆ ತಮ್ಮ ನಗು ಮುಖದೊಂದಿಗೆ ಸಹಾಯ ಹಸ್ತ ನೀಡಿ ನೆರವಾದ ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಾಗದ ದುಃಖ ಮರೆಯಲು ಸಾಧ್ಯವೇ ಇಲ್ಲ.
ನೀವು ಉನ್ನತ ಸಂಸ್ಥೆಯ ಗೌರವಾನ್ವಿತ ಹುದ್ದೆಯನ್ನು ಅಲಂಕರಿಸಿ ಅದರಲ್ಲೂ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಮಸ್ಜಿದ್ ತಕ್ವಾ ಪಂಪ್ ವೆಲ್ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿಯಾಗಿ ನೀಡಿದ ಸೇವೆಯನ್ನು ನೀವು ಮಸೀದಿಗೆ ಆಗಮಿಸುತ್ತಿದ್ದ ಗಾಂಭೀರ್ಯತೆಯನ್ನು ನೆನೆಸಿ ನಾವೆಲ್ಲರೂ ಕಣ್ಣೀರ ದುಃಖದಲ್ಲಿ ಮುಳುಗಿದ್ದೇವೆ. ಸಮುದಾಯಕ್ಕೆ ಮತ್ತು ಸಮಾಜಕ್ಕೆ ನಿಮ್ಮಿಂದ ಸಲ್ಲಬೇಕಾದ ಹತ್ತು ಹಲವು ಕಾರ್ಯಗಳು ಇನ್ನೂ ಬಾಕಿ ಇದೆ ಆದರೆ ವಿಧಿಯ ಆಟ ಬೇರೆಯಾಗಿತ್ತು. ಬಡವರ ಮತ್ತು ಶೋಷಿತರ ಪಾಲಿಗೆ ನೀವು ಆಧಾರ ಸ್ತಂಭವಾಗಿದ್ದೀರಿ.
ನಿಮಗೆ ಮಘ್ಫಿರತ್ ಮತ್ತು ಮರಹಮತ್ ನೀಡಿ ಅಲ್ಲಾಹು ಅನುಗ್ರಹಿಸಲಿ. ನಿಮ್ಮನ್ನು ಅಗಲಿದ ದುಃಖವನ್ನು ಸಹಿಸುವ ಶಕ್ತಿ ನಿಮ್ಮ ಕುಟುಂಬದವರಿಗೂ ಮತ್ತು ನಮಗೆಲ್ಲರಿಗೂ ನೀಡಲಿ. ಆಮೀನ್
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ