janadhvani

Kannada Online News Paper

ಅಬುಧಾಬಿ ಮತ್ತು ಅಜ್ಮಾನ್‌ನಲ್ಲಿ ಕಾಣೆಯಾಗಿದ್ದ ಯುವಕರಿಬ್ಬರು ಮೃತಪಟ್ಟ ನೆಲೆಯಲ್ಲಿ ಪತ್ತೆ

ಅಜ್ಮಾನ್‌ನ ಅಲ್ ಖೋರ್ ಟವರ್ ಬಳಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರಿಂದ ಹೃದಯವಿದ್ರಾವಕ ಸುದ್ದಿ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.

ಅಬುಧಾಬಿ: ವಾರಗಳ ಹಿಂದೆ ನಾಪತ್ತೆಯಾಗಿದ್ದ ಮಲಯಾಳಿ ಯುವಕ ಅಬುಧಾಬಿಯಲ್ಲಿ ಮೃತಪಟ್ಟ ನೆಲೆಯಲ್ಲಿ ಪತ್ತೆಯಾಗಿದ್ದಾರೆ. ತ್ರಿಶೂರ್ ನ ಒರುಮನಯೂರ್ ನಿವಾಸಿ ಶೆಮೀಲ್ (28) ಮೃತಪಟ್ಟವರು. ಅವರು ಮಾರ್ಚ್ 31 ರಿಂದ ನಾಪತ್ತೆಯಾಗಿದ್ದರು.

ಪೊಲೀಸರ ತನಿಖೆಯ ವೇಳೆ ನಿನ್ನೆ ಅಬುಧಾಬಿ ಮುಸಫ್ಫಾದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮೃತದೇಹ ಪತ್ತೆಯಾಗಿದೆ. ದಿನಗಟ್ಟಲೆ ಹಳೆಯದಾದ ಮೃತದೇಹವನ್ನು ಬನಿಯಾಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಸಂಸ್ಥೆಯ ಮಾಲೀಕರಿಗೆ ಮಾಹಿತಿ ನೀಡಿದರು. ಶೆಮೀಲ್ ಅಬುಧಾಬಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಇವರು ಅಬುಧಾಬಿ ಕೆಎಂಸಿಸಿ ಒರುಮನಯೂರು ಪಂಚಾಯತ್ ಸಮಿತಿ ಸದಸ್ಯ ಕಾಳತ್ ಸಲೀಂ ಅವರ ಪುತ್ರ.

ನಾಪತ್ತೆಯಾಗಿದ್ದ ಪಾಕಿಸ್ತಾನಿ ಬಾಲಕ ಮೃತ್ಯು

ಅಜ್ಮಾನ್: ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ವಲಸಿಗ ಬಾಲಕ ಯುಎಇಯಲ್ಲಿ ಮೃತಪಟ್ಟ ನೆಲೆಯಲ್ಲಿ ಪತ್ತೆಯಾಗಿದ್ದಾನೆ. ಪಾಕಿಸ್ತಾನ ಮೂಲದ 17 ವರ್ಷದ ಇಬ್ರಾಹಿಂ ಮುಹಮ್ಮದ್ ಮೃತ ಬಾಲಕ. ವರದಿಗಳ ಪ್ರಕಾರ, ಬಾಲಕ ತನ್ನ ತಾಯಿಯೊಂದಿಗೆ ಜಗಳವಾಡಿದ ನಂತರ ಮನೆಯಿಂದ ಹೊರಟಿದ್ದಾನೆ. ಬಾಲಕನ ಮೃತದೇಹ ಪತ್ತೆಯಾದ ಬಗ್ಗೆ ಅಜ್ಮಾನ್ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಮನೆಯವರು ಬಂದು ಮೃತದೇಹವನ್ನು ಗುರುತಿಸಿದ್ದಾರೆ.

ಮೃತ ಇಬ್ರಾಹಿಂ ಮುಹಮ್ಮದ್ ಪಾಕಿಸ್ತಾನಿ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯವನಾಗಿದ್ದ. ಅಜ್ಮಾನ್‌ನ ಅಲ್ ಖೋರ್ ಟವರ್ ಬಳಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರಿಂದ ಹೃದಯವಿದ್ರಾವಕ ಸುದ್ದಿ ಬಂದಿದೆ ಎಂದು ಮಗುವಿನ ತಾಯಿ ಹೇಳಿದ್ದಾರೆ. ಇದಕ್ಕೂ ಮುನ್ನ ಬಾಲಕ ಕಾಣೆಯಾದ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಮಗುವಿನ ತಂದೆ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.

ಮಗ ಹಿಂತಿರುಗುತ್ತಾನೆ ಎಂದು ಆಶಿಸಿದ್ದೆ ಎಂದು ತಾಯಿ ಹೇಳಿದರು. ಕೆಲವು ದಿನಗಳ ಹಿಂದೆ ಶಾರ್ಜಾದಲ್ಲಿ ಕಾಣಿಸಿಕೊಂಡಿದ್ದಾನೆ ಎಂಬ ಮಾಹಿತಿ ಆಧಾರದಲ್ಲಿ ತೆರಳಿ ಪರಿಶೀಲಿಸಿದಾಗ ಲಭಿಸಿದ ಮಾಹಿತಿ ತಪ್ಪಾಗಿತ್ತು. ತನ್ನ ಮಗ ಹಿಂತಿರುಗುತ್ತಾನೆ ಎಂಬ ಭರವಸೆಯೊಂದಿಗೆ ಪ್ರತಿ ದಿನವನ್ನು ಮುಂದೂಡುತ್ತಿದ್ದೆ.ಆದರೆ, ಇಂದು ನನಗೆ ಅತ್ಯಂತ ಭಯಾನಕ ಸುದ್ದಿ ಲಭಿಸಿದೆ. ತನ್ನ ಪರಿಸ್ಥಿತಿಯನ್ನು ಯಾವ ತಾಯಿಯೂ ಎದುರಿಸಬಾರದು ಎಂದು ಮಾಧ್ಯಮಗಳಿಗೆ ತಾಯಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com