janadhvani

Kannada Online News Paper

ಕೆಸಿಎಫ್ ಕುವೈಟ್: ನಾಳೆ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್- ಮದನೀಯಂ ಖ್ಯಾತಿಯ ಅಬ್ದುಲ್ ಲತೀಫ್ ಸಖಾಫಿ ಮುಖ್ಯ ಅತಿಥಿ

ಕುವೈಟ್ ಸಿಟಿ: ಜಗತ್ತು ಕಂಡ ಮಹಾನಾಯಕ ವಿಶ್ವ ಪ್ರವಾದಿ صلي الله عليه وسلم ಜನ್ಮದಿನದ ಅಂಗವಾಗಿ, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ವತಿಯಿಂದ ಬೃಹತ್ ಮೀಲಾದ್ ಸಮ್ಮೇಳನವು ಸೆ.22 ರಂದು ಸಂಜೆ 5 ಗಂಟೆಗೆ ಅಬ್ಬಾಸಿಯ ಸೆಂಟ್ರಲ್ ಸ್ಕೂಲ್ನಲ್ಲಿ ನಡೆಯಲಿದೆ.

“ಜಗತ್ತಿಗೆ ಕರುಣೆಯ ಪ್ರವಾದಿ” ಎಂಬ ಘೋಷ ವಾಕ್ಯದೊಂದಿಗೆ ನಡೆಸಲ್ಪಡುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮದನೀಯಂ ಖ್ಯಾತಿಯ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಹಾಗೂ ನೆಚ್ಚಿನ ನಾಯಕ ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಭಾಗವಹಿಸಲಿರುವರು.

ಸಯ್ಯಿದ್ ಕುಟುಂಬದ ಧ್ರುವತಾರೆ ಸಯ್ಯಿದ್ ಹಬೀಬ್ ಕೋಯ ತಂಙಳ್ ಕುವೈಟ್ ದುವಾ ಆಶಿರ್ವಚನ ನೀಡಲಿರುವರು.

error: Content is protected !! Not allowed copy content from janadhvani.com