janadhvani

Kannada Online News Paper

ದಾರುಲ್ ಅಶ್ಅರಿಯ್ಯ ಸುರಿಬೈಲು: ಬೆಳ್ಳಿ ಹಬ್ಬ ಪ್ರಯುಕ್ತ ಆಸ್ಪತ್ರೆಯಲ್ಲಿ ‘ಈದ್ ಫುಡ್’ ವಿತರಣೆ

ಕಲ್ಲಡ್ಕ: ನಾಡಿನ ಪ್ರತಿಷ್ಠಿತ ಸಮನ್ವಯ ಶಿಕ್ಷಣ ಕೇಂದ್ರ ದಾರುಲ್ ಅಶ್ಅರಿಯ ಸುರಿಬೈಲ್ ತನ್ನ 25 ವರ್ಷಗಳನ್ನು ಪೂರೈಸಿ, 2023 ನವೆಂಬರ್ 1,2,3 ದಿನಾಂಕಗಳಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸುವ ಸಂಭ್ರಮದಲ್ಲಿದೆ.

ಸಂಸ್ಥೆಯು ಬೆಳ್ಳಿ ಹಬ್ಬ ಅಂಗವಾಗಿ 25 ಅಂಶ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರ ಮೊದಲನೆಯ ಕಾರ್ಯಕ್ರಮವಾಗಿ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ನೂರಾರು ರೋಗಿಗಳಿಗೆ, ಸಹಾಯಕರಿಗೆ, ವೈದ್ಯಾಧಿಕಾರಿಗಳಿಗೆ ಪವಿತ್ರ ಬಕ್ರೀದ್ ಹಬ್ಬದ ದಿನ ಆಹಾರ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಾಯಿತು.

ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಮಹಮ್ಮದ್ ಅಲಿ ಸಖಾಫಿ ಉಸ್ತಾದರು ಮಾತನಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸ್ಟಾಲಿನ್, SSF ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಹಾಗೂ ಅಕ್ಬರ್ ಅಲಿ ಮದನಿ ಆಲಂಪಾಡಿ, ಕರೀಂ ಕದ್ಕಾರ್, ಝಕರಿಯ ನಾರ್ಶ, ಹಂಝ ಮಂಚಿ, ಇಸ್ಮಾಯಿಲ್ ಬಂಟ್ವಾಳ, ರಝ್ಝಾಕ್ ಹನೀಫಿ, ರವೂಫ್ ಅಶ್-ಅರಿ, ಮುಸ್ತಫ ಅಶ್-ಅರಿ, ಝಾಹಿರ್ ಪಾತೂರ್ ಉಪಸ್ಥಿತರಿದ್ದರು.

ಸಿದ್ದೀಕ್ ಅಶ್-ಅರಿ, ಕುಕ್ಕಾಜೆ ಸಂಸ್ಥೆಯ 25 ಅಂಶ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಲು ಸಹಕಾರ ಕೋರಿದರು.