ಮಂಗಳೂರು ; ಎಸ್ವೈಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ವತಿಯಿಂದ ‘ಕ್ಯಾಬ್ಝೋನ್ -23’ ಶಿಬಿರವು ಪಡೀಲ್ ಇಲ್ಮ್ ಸೆಂಟರಿನಲ್ಲಿ ನಡೆಯಿತು. ಜಿಲಾಧ್ಯಕ್ಷ ವಿ.ಯು. ಇಸ್ಹಾಕ್ ಝುಹ್ರಿ ಕಾನೆಕೆರೆ ರವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಜಿಲ್ಲಾ ದಅ್ವಾ ಕಾರ್ಯದರ್ಶಿ ಬದ್ರುದ್ದೀನ್ ಅಝ್ಹರಿ ಕೈಕಂಬ ಸಭೆಯನ್ನು ಉದ್ಘಾಟಿಸಿದರು.


ರ

ಾಜ್ಯ ಜಂಇಯ್ಯತುಲ್ ಉಲಮಾ ನಾಯಕ ಮುಹಮ್ಮದ್ ಸಅದಿ ವಳವೂರು ಹಾಗೂ ಎಸ್ವೈಎಸ್ ರಾಜ್ಯ ಸಮಿತಿ ನಾಯಕ ಬಶೀರ್ ಮದನಿ ಕೂಳೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ ಮೆಚ್ಚುಗೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎಸ್ವೈಎಸ್ ರಾಜ್ಯ ಕಾರ್ಯದರ್ಶಿ ಖಲೀಲ್ ಮಾಲಿಕಿ ಬೋಳಂತೂರು, ಎಸ್ವೈಎಸ್ ರಾಜ್ಯ ನಾಯಕ ಆಸಿಫ್ ಕೃಷ್ಣಾಪುರ, ಜಿಲ್ಲಾ ಕೋಶಾಧಿಕಾರಿ ನಝೀರ್ ಮುಡಿಪು, ಜಿಲ್ಲಾ ಕಾರ್ಯದರ್ಶಿಗಳಾದ ಅಬ್ದುರ್ರಝಾಕ್ ಭಾರತ್ ಮಂಚಿ, ಖಾಲಿದ್ ಹಾಜಿ ಭಟ್ಕಳ, ಬಶೀರ್ ಸಖಾಫಿ ಉಳ್ಳಾಲ, ಫಾರೂಕ್ ಶೇಡಿಗುರಿ ಹಾಗೂ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಜಿಲ್ಲಾ ವ್ಯಾಪ್ತಿಯ ಏಳು ಝೋನ್ ಗಳ ಕ್ಯಾಬಿನೆಟ್ ನಾಯಕರು ಭಾಗವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅದ್ದು ಹಾಜಿ ಪ್ರಿಂಟೆಕ್ ಸ್ವಾಗತಿಸಿ, ಕಾರ್ಯದರ್ಶಿ ಮೆಹ್ಬೂಬ್ ಸಖಾಫಿ ಕಿನ್ಯ ಧನ್ಯವಾದವಿತ್ತರು.







