✍️ಕೆ.ಎಂ ಇರ್ಶಾದ್ ಪಕ್ಷಿಕೆರೆ
ಹೌದು ಕರ್ನಾಟಕ ಯಾತ್ರೆ ಎಂದು ಕೇಳುವಾಗ ಮೈ ನವಿರೇಳುತ್ತದೆ, ಕರುನಾಡಿನ ಮಣ್ಣನ್ನು ಮಾನವೀಯ ಸಂದೇಶಗಳ ಮೂಲಕ ಧನ್ಯಗೊಳಿಸಿದ ಐತಿಹಾಸಿಕ ಯಾತ್ರೆ. ಕೋಮುವಾದದಿಂದ ಕಲುಷಿತ ಗೊಂಡ ಕರುನಾಡಿನ ಮಣ್ಣಲ್ಲಿ ಮನು ಕುಲವನ್ನು ಗೌರವಿಸಿ ಎಂಬ ಉದಾತ್ತವಾದ ಸಂದೇಶದೊಂದಿಗೆ ಮಾನವೀಯ ಸಂದೇಶಗಳನ್ನು ಬಿತ್ತರಿಸುತ್ತಾ ಗುಲ್ಬರ್ಗಾದಿಂದ ಮಂಗಳೂರು ತನಕ ನಡೆದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಕರ್ನಾಟಕ ಯಾತ್ರೆ ಪ್ರತಿಯೊಬ್ಬರ ಕಣ್ಣಂಗಳದಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ.


ಅಂದು ಎಪ್ರಿಲ್ 29, 2014 Ssf ಕರ್ನಾಟಕ ಸ್ಥಾಪಕ ದಿನದ ಅಂಗವಾಗಿ ಪುತ್ತೂರು ಲಯನ್ಸ್ ಹಾಲ್ ನಲ್ಲಿ SSF ಬೆಳ್ಳಿ ಹಬ್ಬ ಘೋಷಣಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು, ಬೆಳ್ಳಿ ಹಬ್ಬದ ಪ್ರಯುಕ್ತ 25 ಕಾರ್ಯಕ್ರಮ ಘೋಷಣೆಯಲ್ಲಿ ಎ.ಪಿ ಉಸ್ತಾದರ ಕರ್ನಾಟಕ ಯಾತ್ರೆಯು ಒಂದಾಗಿತ್ತು, ಆ ಯಾತ್ರೆ ಘೋಷಣೆಯಾದ ಅಂದಿನಿಂದ ಜಾತಿ ಭೇದಮನ್ಯೆ ಸರ್ವರೂ ಆ ಧನ್ಯ ನಿಮಿಷಕ್ಕಾಗಿ ಕಾದು ಕುಳಿತರು, ಗುಂಬಝ್ ನಗರ ಗುಲ್ಬರ್ಗಾದಿಂದ ಬಂದರು ನಗರ ಮಂಗಳೂರು ತನಕ ಯಾತ್ರೆ ನಿಗದಿ ಆಯಿತು,
ಆಗ ಅಸೂಯೆಯಿಂದ ಕೆಲವರಿಗೆ ತುರಿಕೆ ಆರಂಭವಾಯಿತು, ಮಂಗಳೂರಿನಲ್ಲಾದರೆ ಓಕೆ, ಆದರೆ ಗುಲ್ಬರ್ಗಾದ ಗೌಡ ಜನರಿಗೆ ಏನು ಗೊತ್ತು ಎ.ಪಿ ಉಸ್ತಾದರನ್ನು, ಎಂದು ಅಪಹಾಸ್ಯ ಮಾಡಿದರು, ಆದರೆ ನಡೆದದ್ದೆ ಬೇರೆ ಟೀಕೆ ಮಾಡಿದವರನ್ನು ನಾಚಿಸುವಂತೆ ಕರ್ನಾಟಕ ಯಾತ್ರೆ ಅಭೂತಪೂರ್ವ ಯಶ ಕಂಡಿತು, ಎ.ಪಿ ಉಸ್ತಾದ್ ಸರಿ ಸುಮಾರು 9 ದಿನದಲ್ಲಿ 21 ಜಿಲ್ಲೆಗಳಿಗೆ ಬೇಟಿ ಕೊಟ್ಟಾಗ ಅಲ್ಲಿಯ ಜನರ ಬೃಹತ್ ಸ್ವಾಗತ ಸಮ್ಮೇಳನಗಳು ನಿಜಕ್ಕೂ ಅವಿಸ್ಮರಣೀಯ, ಎ.ಪಿ ಉಸ್ತಾದ್ ಯಾತ್ರೆಯುದ್ದಕ್ಕೂ ಸರ್ವ ಧರ್ಮದ.ನಾಯಕರು ಒಗ್ಗೂಡಿದ ಸ್ವಾಗತ ಸಮ್ಮೇಳನದಲ್ಲಿ ಮಾನವೀಯ ಸಂದೇಶಗಳನ್ನು ನಿರರ್ಗಳವಾಗಿ ಉರ್ದುವಿನಲ್ಲಿ ಬಿತ್ತರಿಸಿದಾಗ, ಸರ್ವ ಧರ್ಮದ ನಾಯಕರು ಶ್ಲಾಘಿಸಿ ಹೇಳಿದ ಮಾತು, *ಎ.ಪಿ ಉಸ್ತಾದ್ ನೀವು ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಯಾತ್ರೆ ಮಾಡಬೇಕು, ನಿಮ್ಮ ಹಿಂದೆ ನಾವಿದ್ದೇವೆ.
ಹೀಗೆ ಸಾಗಿದ ಯಾತ್ರೆ ನವೆಂಬರ್ 2ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾರೋಪ ಗೊಳ್ಳುವಾಗ ಅಕ್ಷರಾರ್ಥದಲ್ಲಿ ಸಮ್ಮೇಳನ ನಗರಿ ಹಾಲ್ಗಡಲಾಗಿತ್ತು, ಸಮ್ಮೇಳನದ ಮದ್ಯೆ ಧಾರಾಕಾರವಾಗಿ ಮಳೆ ಸುರಿಯಿತು, ಮುಖ್ಯ ಮಂತ್ರಿ ಮಾನ್ಯ ಸಿದ್ದರಾಮಯ್ಯನವರು ಭಾಷಣ ಮಾಡುತ್ತಿದ್ದರು, ಮಳೆ ಬಂದದರಿತು ಅವರು ಭಾಷಣ ನಿಲ್ಲಿಸಲೇ ಎಂದು ನೆರೆದ ಸಭಿಕರೊಂದಿಗೆ ಕೇಳಿದಾಗ ಕೂಡಿದ ಲಕ್ಷಾಂತರ ಮಂದಿ ಅಲ್ಲಾಹು ಅಕ್ಬರ್ ಎಂದು ತಕ್ಬೀರ್ ಹೇಳುತ್ತಾ ಮಳೆ ರಾಯನ ಆರ್ಭಟಕ್ಕೆ ಬೆದರದೆ ಕುಳಿತು ಭಾಷಣ ಮುಂದುವರಿಸುವಂತೆ ಹೇಳಿದರು.
ಆ ಶಿಸ್ತನ್ನು ಕಂಡು ವೇದಿಕೆಯಲ್ಲಿದ್ದ ಹಿಂದೂ ನಾಯಕ ಪೇಜಾವರ ಶ್ರೀ SSF ನ ಸದಸ್ಯರನ್ನು ಶ್ಲಾಘಿಸಿ, ಧಾರಾಕಾರವಾಗಿ ಸುರಿದ ಮಳೆಗೆ ವಿಚಳಿತರಾಗದೆ ಕುಳಿತ Ssf ನವರ ಶಿಸ್ತು ನಿಜಕ್ಕೂ ಮಾದರಿಯೋಗ್ಯವಾದದ್ದು, ದೇಶಕ್ಕೆ ಅಪಾಯ ಎದುರಾದಾಗ ಇದೇ ರೀತಿ ಎದೆಯೊಡ್ಡಿ ನಿಲ್ಲುತ್ತೀರೆಂಬ ಭರವಸೆಯನ್ನು ಮೂಡಿಸಿದ್ದೀರೆಂದು ಹೇಳಿದರು.
ಸುಲ್ತಾನುಲ್ ಉಲಮಾ ತಾನು ಭೇಟಿ ಕೊಟ್ಟ ಎಲ್ಲಾ ಸ್ತಳದಲ್ಲೂ ಸಾಂತ್ವನ, ಮನೆ ನಿರ್ಮಾಣ, ಮದುವೆ, ಮಸೀದಿ ಉದ್ಘಾಟನ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿ ಅಕ್ಷರಾರ್ಥದಲ್ಲಿ ಮನು ಕುಲವನ್ನು ಗೌರವಿಸುವ ಸಂದೇಶವನ್ನು ಸಾಕ್ಷಾತ್ಕಾರ ಗೊಳಿಸಿದರು.
ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನಡೆಸಿದ ಅಭೂತಪೂರ್ವ ಯಶ ಕಂಡ ಕರ್ನಾಟಕ ಯಾತ್ರೆಗೆ ಇಂದು ಎಂಟು ವರ್ಷ ತುಂಬಿತು… ಅಲ್ಲಾಹನು ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಆಫಿಯತ್ತಿರುವ ದೀರ್ಘಾಯುಶ್ಯವನ್ನು ನೀಡಿ ಅನುಗ್ರಹಿಸಲಿ ಆಮೀನ್.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ