janadhvani

Kannada Online News Paper

ಅಲ್ ಹೈದ್ರೋಸಿಯ ಮದ್ರಸಾ ಕೂರತ್: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

ಕಡಬ: ಅಲ್ ಪಝಲ್ ಜುಮ್ಮಾ ಮಸೀದಿ ಮತ್ತು ಅಲ್ ಹೈದ್ರೋಸಿಯ ಮದ್ರಸಾ ಕೂರತ್ ವಾರದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸ ಆಚರಿಸಲಾಯಿತು.

ಧ್ವಜಾರೋಹಣ ಕೂರತ್ ಜಮಾಅತ್ ಕಮೀಟಿ ಅಧ್ಯಕ್ಷರು ಅಬೂಬಕ್ಕರ್ ಹಾಜಿ, ಅಬ್ದುಲ್ ಖಾದರ್ ಹನೀಫಿ ಮುದರ್ರಿಸ್ ಸದರ್ ಉಸ್ತಾದ್ ಸಿರಾಜುದ್ದೀನ್ ಹಿಮಮಿ ಕೂರತ್ ನಿರವೇರಿಸಿದರು. ಭಾರತ ದೇಶವು ಭಾವೈಕ್ಯತೆಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಕೋಮು ಗಲಭೆ, ಅತ್ಯಾಚಾರ, ಕೊಲೆಗಳಿಂದ ಭಾರತ ದೇಷವನ್ನು ಮುಕ್ತ ಗೊಳಿಸಲು ಪ್ರಯತ್ನಿಸಿ ಶಾಂತಿಯ ಮಾನವೀತೆಯ ಸೌಹಾರ್ದತೆಯ ಭಾರತವನ್ನು ಕಟ್ಟೋಣ, ನಾವೆಲ್ಲರು ಒಂದಾಗಿ ಪ್ರಯತ್ನಿಸೋಣ ಎಂಬ ಪ್ರಾಸ್ತಾವಿಕವಾಗಿ ಭಾಷಣದೊಂದಿಗೆ ಅನ್ಸಾರ್ ಸಅದಿ ಮುಅಲ್ಲಿಂ ಕೂರತ್ ಸಂದೇಶ ನೀಡಿದರು.

ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ನಡೆದ ಮಕ್ಕಳ ಚಿತ್ರ ಕಲೆ ಪ್ರಭಂದ ಕ್ವಿಝ್ ಕಾರ್ಯಕ್ರಮದ ಭಾಗವಹಿಸದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು ಕಾರ್ಯಕ್ರಮದಲ್ಲಿ ಇಲ್ಯಾಸ್ ಅಂಜದಿ ಉಸ್ತಾದ್ ಲತೀಪ್ ಉಸ್ತಾದ್ ಭಾಗವಹಿಸಿದರು ಕೊನೆಯಲ್ಲಿ ಸಿಹಿ ತಿಂಡಿ ಪಾನಿಯ ನೀಡಲಾಯಿತು.

error: Content is protected !! Not allowed copy content from janadhvani.com