ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಶಿವಸೇನೆ,BSP ಮತ್ತು AIMIM ಅನ್ನು ಟೀಕಿಸಿದೆ. ಮಾಯಾವತಿ ಮತ್ತು ಅಸದುದ್ದೀನ್ ಓವೈಸಿ ಬಿಜೆಪಿ ಗೆಲುವಿಗೆ ಸಹಾಯ ಮಾಡಿದ್ದಾರೆ ಎಂದು ಶಿವಸೇನೆ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಆರೋಪಿಸಿದ್ದಾರೆ.
ಬಿಜೆಪಿಗೆ ನೀಡಿದ ಕೊಡುಗೆಗಾಗಿ ಪದ್ಮವಿಭೂಷಣ ಮತ್ತು ಭಾರತರತ್ನ ನೀಡಬೇಕು ಎಂದು ವ್ಯಂಗ್ಯವಾಡಿದರು. ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯುಪಿ ಅವರ ರಾಜ್ಯವಾಗಿತ್ತು. ಆದರೆ, ಅಖಿಲೇಶ್ ಯಾದವ್ ಸ್ಥಾನ ಮೂರು ಪಟ್ಟು ಹೆಚ್ಚಾಗಿದೆ. 42ರಿಂದ 125ಕ್ಕೆ ಏರಿಕೆಯಾಗಿದೆ. ಮಾಯಾವತಿ ಮತ್ತು ಓವೈಸಿ ಬಿಜೆಪಿ ಗೆಲುವಿಗೆ ನೆರವಾದರು. ಆದ್ದರಿಂದ ಅವರಿಗೆ ಪದ್ಮವಿಭೂಷಣ ಮತ್ತು ಭಾರತ ರತ್ನ ನೀಡಬೇಕು ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದರು.
ಅದೇ ಸಮಯದಲ್ಲಿ, ಉತ್ತರಾಖಂಡದಲ್ಲಿ ಬಿಜೆಪಿ ಮುಖ್ಯಮಂತ್ರಿಯ ಸೋಲನ್ನು ರಾವತ್ ಎತ್ತಿ ತೋರಿಸಿದರು. ಗೋವಾದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಸೋತಿದ್ದಾರೆ. ಪಂಜಾಬ್ ನಲ್ಲಿ ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ಎಲ್ಲರೂ ಸೇರಿ ಭರ್ಜರಿ ಪ್ರಚಾರ ಮಾಡಿದರೂ ಸೋತಿದ್ದು ಯಾಕೆ? ಯುಪಿ, ಉತ್ತರಾಖಂಡ ಮತ್ತು ಗೋವಾ ಈಗಾಗಲೇ ನಿಮ್ಮದಾಗಿತ್ತು. ಹಾಗಾಗಿ ಪರವಾಗಿಲ್ಲ. ಯುಪಿಯಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆಯ ಸೋಲಿಗಿಂತ ಪಂಜಾಬ್ನಲ್ಲಿ ನಿಮ್ಮದು ಬಲು ದೊಡ್ಡ ಸೋಲಾಗಿದೆ ಎಂದು ರಾವತ್ ಹೇಳಿದರು.