ಉಡುಪಿ: ಹೊಸದಿಲ್ಲಿ ಇಂಡಿಯನ್ ಅಚೀವರ್ಸ್ ಫಾರಂ ವತಿಯಿಂದ ನೀಡುವ 2021ನೇ ಇಂಡಿಯನ್ ಅಚೀವರ್ಸ್ ಅವಾರ್ಡ್ ಗೆ ಪಾತ್ರರಾದ ಯಶಸ್ವಿ ಉದ್ಯಮಿಯೂ, ಸಮಾಜ ಸೇವಕರೂ, ತೋನ್ಸೆ ಹೆಲ್ತ್ ಸೆಂಟರ್ ಇದರ ಅಧ್ಯಕ್ಷರೂ ಆದ ಜನಾಬ್ ಬಿ ಎಮ್ ಜಾಫರ್ ತೋನ್ಸೆ ರವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ತೋನ್ಸೆ ಹೆಲ್ತ್ ಸೆಂಟರ್ ನಲ್ಲಿ ಸನ್ಮಾನಿಸಲಾಯಿತು.
ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್ ಸುಬ್ಹಾನ್ ಅಹ್ಮದ್ ಹೊನ್ನಾಳ ರವರ ನೇತೃತ್ವದಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ ಹೂ ಗುಚ್ಛ ನೀಡಿ ಗೌರವಿಸಿದರು ರಾಜ್ಯ ಸಮಿತಿ ಸದಸ್ಯರೂ ಜಿಲ್ಲಾ ಕಾರ್ಯದರ್ಶಿಯೂ ಆದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ಮರಣಿಕೆ ನೀಡಿ ಗೌರವಿಸಿದರು, ಜಿಲ್ಲಾ ಕಾರ್ಯದರ್ಶಿಗಳಾದ ಕೆ ಎಸ್ ಎಮ್ ಮನ್ಸೂರ್, ಅಶ್ರಫ್ ದಾರುಸ್ಸಲಾಂ, ನಾಯಕರಾದ ಝಂಝಂ ಹೂಡೆ, ಝುಲ್ಫಿಕರ್ ಹೂಡೆ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.







