janadhvani

Kannada Online News Paper

ಅಮೃತ ಮಹೋತ್ಸವ – SYS, SSF ತುಂಬೆ ಶಾಖೆಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಯೋತ್ಸವದ ಅಂಗವಾಗಿ ತುಂಬೆ SYS & SSF ವತಿಯಿಂದ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಸೆಂಟರ್ ವಠಾರದಲ್ಲಿ 15/08/2021 ರ ಬೆಳಿಗ್ಗೆ 8 ಘಂಟೆಗೆ SYS ತುಂಬೆ ಬ್ರಾಂಚ್ ಅಧ್ಯಕ್ಷರಾದ ಬಹು!ಮುಸ್ತಾಕ್ ಮದನಿ ತುಂಬೆ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ SSF ತುಂಬೆ ಶಾಖೆ ಅಧ್ಯಕ್ಷರಾದ ಬಹು! ಅಬ್ದುಲ್ ಲತೀಫ್ ಹಿಮಮಿ ದುಃಅ ನೆರವೇರಿಸಿ,ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಇಂತಿಯಾಝ್ ಅಲ್ಫಾ ಹಾಗು ಬಹು!ಮುಸ್ತಾಕ್ ಮದನಿ ಪ್ರಾಸ್ತಾವಿಕ ಭಾಷಣಗೈದರು,ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ತುಂಬೆ ಇದರ ಪ್ರ.ಕಾರ್ಯದರ್ಶಿ ಮೂಸಬ್ಬ,ತುಂಬೆ ಗ್ರಾಮ ಪಂಚಾಯತ್ ಸದಸ್ಯರಾದ ಝಹೂರ್ ತುಂಬೆ,ಅಝೀಝ್ ತುಂಬೆ, SSF ಫರಂಗಿಪೇಟೆ ಸೆಕ್ಟರ್ ನಾಯಕರಾದ ಸತ್ತಾರ್ ಮಲ್ಲಿ, SSF ತುಂಬೆ ಶಾಖೆ ಪ್ರ.ಕಾರ್ಯದರ್ಶಿ ಶಾಕಿರ್ ತುಂಬೆ ,ಕ್ಯಾಂಪಸ್ ನಾಯಕರಾದ ಬಾಸಿತ್ ಟಿ.ಎ ಮುಂತಾದವರು ಉಪಸ್ಥರಿದ್ದರು. ಕಾರ್ಯಕ್ರಮವನ್ನು SYS ತುಂಬೆ ಬ್ರಾಂಚ್ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಹಾಜಿ! ಟಿ.ಎ ಸ್ವಾಗತಿಸಿದರು,ರಝೀನ್ ವಂದಿಸಿದರು,ನೌಶಾದ್ ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.

ವರದಿ :- ಇರ್ಫಾಝ್ ತುಂಬೆ