ಶಾರ್ಜಾ :ತಂದೆಯ ಪ್ರೇಯಸಿಯಿಂದ ದೌರ್ಜನ್ಯಕ್ಕೊಳಗಾಗಿ ಶಾರ್ಜಾ ಪೊಲೀಸರೊಂದಿಗೆ ಆಶ್ರಯ ಪಡೆದಿರುವ ವಿದ್ಯಾರ್ಥಿಗಳ ಅಧ್ಯಯನವನ್ನು ಕೋಝಿಕ್ಕೋಡ್ ಕಾರಂದೂರ್ ಮರ್ಕಝ್ ವಹಿಸಿಕೊಂಡಿದೆ.
ದುಬೈ ಮರ್ಕಝ್ ಝಹ್ರತುಲ್ ಖುರ್ ಅನ್ ನಿರ್ದೇಶಕ ಯಾಹ್ಯಾ ಅಬ್ದುಲ್ ಖಾದಿರ್ ಮಾತನಾಡಿ, ಆಲಪ್ಪುಝದಲ್ಲಿರುವ ಮರ್ಕಝ್ ಸಂಸ್ಥೆ ಅಧ್ಯಯನಕ್ಕೆ ಸೌಲಭ್ಯಗಳನ್ನು ಒದಗಿಸಲಿದ್ದು, ಮಕ್ಕಳ ಪಾಸ್ಪೋರ್ಟ್ಗಳನ್ನು ಪಡೆಯುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.
ಈ ಮಕ್ಕಳು ಊರಲ್ಲಿರುವ ಅವರ ಸ್ವಂತ ತಾಯಿಯ ಬಳಿ ತಲುಪಿಸುವಂತೆ ಸಹಾಯ ಕೋರಿ ಪೊಲೀಸರನ್ನು ಸಂಪರ್ಕಿಸಿದರು. ಆದಾಗ್ಯೂ, ನಾಲ್ಕು ವರ್ಷಗಳಿಂದ ವೀಸಾ ಇಲ್ಲದೇ ವಾಸವಾಗಿರುವ ಇವರಿಗೆ ಮನೆಗೆ ಮರಳಲು 60,000 ದಿರ್ಹಮ್ ದಂಡವನ್ನು ಪಾವತಿಸಬೇಕಾಗುತ್ತದೆ. ಅವರ ಅಧ್ಯಯನವನ್ನು ವರ್ಷಗಳಿಂದ ಮೊಟಕುಗೊಳಿಸಲಾಗಿದೆ.ಪೊಲೀಸರ ಸೂಚನೆಯಂತೆ ವಿದ್ಯಾರ್ಥಿಗಳು ಈಗ ಸಮಾಜ ಸೇವಕರ ಆರೈಕೆಯಲ್ಲಿದ್ದಾರೆ.
ಶಾರ್ಜಾದಲ್ಲಿ ಹುಟ್ಟಿ ಬೆಳೆದ ವಿದ್ಯಾರ್ಥಿಗಳಲ್ಲಿ ಒಬ್ಬನಿಗೆ 17 ವರ್ಷ ಮತ್ತು ಇನ್ನೊಬ್ಬನಿಗೆ 12 ವರ್ಷ. ದಂಪತಿಗಳು ಪರಸ್ಪರ ಜಗಳವಾಡಿ, ಪತ್ತನಂತ್ತಿಟ್ಟಾ ಮೂಲದ ತಾಯಿ ಊರಿಗೆ ಮರಳಿದ್ದರು. ಈ ಮಕ್ಕಳು ಮಾಹಿ ಮೂಲದ ತಮ್ಮ ತಂದೆಯೊಂದಿಗೆ ಶಾರ್ಜಾದಲ್ಲೇ ಉಳಿದಿದ್ದರು. ತಾಯಿಯ ತಂಗಿಯು, ಇವರ ತಂದೆಯ ಪ್ರೇಯಸಿಯಾಗಿ ಬಂದಿದ್ದು,ಇವರ ಜೀವನವನ್ನು ಬದಲಿಸಿತು ಎಂದು ಮಕ್ಕಳು ಹೇಳುತ್ತಾರೆ.
ಒಬ್ಬನದ್ದು ಎಂಟನೇ ತರಗತಿಯಲ್ಲಿ ಅಧ್ಯಯನ ನಿಂತರೆ, ಇನ್ನೊಬ್ಬ ಐದನೇ ತರಗತಿಯಲ್ಲಿ ಕಲಿಕೆ ಮೊಟಕುಗೊಂಡಿದೆ. ನಾಲ್ಕು ವರ್ಷಗಳಿಂದ ವೀಸಾವನ್ನೂ ನವೀಕರಿಸಿಲ್ಲ.ಪಾಸ್ಪೋರ್ಟ್ ಕೂಡಾ ಅವಧಿ ಮೀರಿದೆ. ಅವರ ತಂದೆ ಈ ಬೇಸಿಗೆಯಲ್ಲೂ ಕೂಡಾ ಈ ಮಕ್ಕಳನ್ನು ಎಸಿ ಸಹ ಇಲ್ಲದ ಕೋಣೆಯಲ್ಲಿ ಇರಿಸಿದ್ದಾಗಿ ಮಕ್ಕಳು ಹೇಳಿದ್ದಾರೆ. ಅನಾರೋಗ್ಯದ ಮಕ್ಕಳಿಗೆ ಚಿಕಿತ್ಸೆಯನ್ನೂ ನೀಡಿಲ್ಲ. ಚಿತ್ರಹಿಂಸೆ ಸಹಿಸಲಾಗದ ಕಾರಣ ಅವರು ಪೊಲೀಸರನ್ನು ಸಂಪರ್ಕಿಸಿದರು.
ಮಕ್ಕಳ ಪಾಸ್ಪೋರ್ಟ್ ಮತ್ತು ಇತರ ದಾಖಲೆಗಳನ್ನು ಹಾಜರುಪಡಿಸುವಂತೆ ಶಾರ್ಜಾ ಪೋಲೀಶರು ತಂದೆಯನ್ನು ಕೇಳಿದ್ದಾರೆ.ತಂದೆಯೊಂದಿಗೆ ಹೋಗಲು ನಿರಾಕರಿಸಿದ್ದಕ್ಕಾಗಿ ಪೊಲೀಸರು ಮಕ್ಕಳನ್ನು ಶಾರ್ಜಾ ಭಾರತೀಯ ಸಂಘ ಮತ್ತು ಮಕ್ಕಳ ರಕ್ಷಣಾ ತಂಡದ ಕಾರ್ಯಕರ್ತರಿಗೆ ಹಸ್ತಾಂತರಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ