ರಿಯಾದ್: ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ವಿದೇಶಿಯರು ಸ್ವದೇಶಕ್ಕೆ ತೆರಳಲು ಈಗ ಪ್ರಾಯೋಜಕರ ಮೂಲಕವಲ್ಲದೆ ರೀ ಎಂಟ್ರಿ ವೀಸಾ ಪಡೆಯಬಹುದು.ಸೌದಿ ಪಾಸ್ಪೋರ್ಟ್ ಪ್ರಾಧಿಕಾರದ (ಸೌದಿ ಜವಾಝಾತ್) ಆನ್ಲೈನ್ ಪೋರ್ಟಲ್ ಅಬ್ಶೀರ್ನಲ್ಲಿ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗಿದೆ.
ಪರಿಷ್ಕೃತ ಉದ್ಯೋಗ ವ್ಯವಸ್ಥೆಯ ಭಾಗವಾಗಿ ಕಾರ್ಮಿಕ ನಿರ್ಗಮನ ಮರು ಪ್ರವೇಶ ವಿಸಾವನ್ನು ಸ್ವಂತವಾಗಿ ಪಡೆಯುವ ವ್ಯವಸ್ಥೆಯನ್ನು ಅಬ್ಶೀರ್ ಪರಿಚಯಿಸಿದೆ. ಇದರೊಂದಿಗೆ, ವಿದೇಶಿ ಕಾರ್ಮಿಕರು ಈಗ ಸ್ವಂತವಾಗಿ ರೀ ‘ಎಂಟ್ರಿ ಪಡೆದು’ ಸೌದಿ ಅರೇಬಿಯಾವನ್ನು ತೊರೆಯಬಹುದು.
ಅಬ್ಶೀರ್ನಲ್ಲಿರುವ ನಿಮ್ಮ ಸ್ವಂತ ಖಾತೆಯಿಂದ ಇ-ಸರ್ವೀಸ್ ಪಾಸ್ಪೋರ್ಟ್-ವೀಸಾ ಸರ್ವೀಸ್ ಮೂಲಕ ಅದನ್ನು ಪಡೆಯ ಬಹುದು. ಕೆಲವು ಷರತ್ತುಗಳು ಅನ್ವಯ.
- ಉದ್ಯೋಗದಾತ ಮತ್ತು ಕೆಲಸಗಾರ ಇಬ್ಬರಿಗೂ ಅಬ್ಶೀರ್, ಇಸ್ತಿಖ್ದಾಂ ಖಾತೆಗಳು ಕಡ್ಡಾಯ.
- ಕೆಲಸಗಾರನ ಹೆಸರಿನಲ್ಲಿ ಯಾವುದೇ ಸಂಚಾರ ದಂಡ ಇರಬಾರದು.
- ಪ್ರಸ್ತುತ ಮಾನ್ಯತೆ ಇರುವ ಎಕ್ಸಿಟ್ ರೀ ಎಂಟ್ರಿ ವೀಸಾ ಹೊಂದಿರಬಾರದು.
- ಮರು ಪ್ರವೇಶ ವೀಸಾ ನೀಡುವ ಸಮಯದಲ್ಲಿ ಕೆಲಸಗಾರ ದೇಶದಲ್ಲಿರಬೇಕು.
- ವೀಸಾ ಶುಲ್ಕ ಪಾವತಿಸಬೇಕು.
- ಇತರ ನಿಯಮಗಳನ್ನು ಅನುಸರಿಸಬೇಕು.
ಆದಾಗ್ಯೂ, ಫೈನಲ್ ಎಕ್ಸಿಟ್ ವಿಸಾ ಪಡೆಯಲು, ಮೇಲೆ ತಿಳಿಸಿದ ಷರತ್ತುಗಳ ಜೊತೆಗೆ, ಸ್ವಂತ ಹೆಸರಿನಲ್ಲಿ ವಾಹನ ಹೊಂದಿರಬಾರದು ಎಂಬ ನಿಯಮವಿದೆ.
ಅಬ್ಶೀರ್ ನಲ್ಲಿ ಸಲ್ಲಿಸಿದ ಕೋರಿಕೆ ಮೇರೆಗೆ, ಅದನ್ನು ಅನುಮೋದಿಸಲು ಅಥವಾ ತಿರಸ್ಕರಿಸಲು ಉದ್ಯೋಗದಾತನಿಗೆ 10 ದಿನಗಳ ಕಾಲಾವಕಾಶವಿರುತ್ತದೆ. ಉದ್ಯೋಗದಾತನು ವೀಸಾವನ್ನು ಅನುಮೋದಿಸಿದರೆ, ಐದು ದಿನಗಳಲ್ಲಿ ನಿರ್ಗಮನ ಮರು-ಪ್ರವೇಶ ವೀಸಾವನ್ನು ಪಡೆಯಬಹುದು.
ಆದಾಗ್ಯೂ, ಉದ್ಯೋಗದಾತನು ವೀಸಾವನ್ನು ನಿರಾಕರಿಸಿದರೆ, ಕಾರ್ಮಿಕ ಸಚಿವಾಲಯವು ಆಕ್ಷೇಪಣೆಯನ್ನು ಪರಿಶೀಲಿಸುತ್ತದೆ ಮತ್ತು ಆರಂಭಿಕ ವಿನಂತಿಯ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ. ಉದ್ಯೋಗದಾತ 10 ದಿನಗಳಲ್ಲಿ ಪ್ರತಿಕ್ರಿಯಿಸದಿದ್ದರೆ, ಕೋರಿಕೆಯನ್ನು ಸ್ವೀಕರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಕಾರ್ಮಿಕನು ಮುಂದಿನ ಐದು ದಿನಗಳಲ್ಲಿ ರೀ ಎಂಟ್ರಿ ವೀಸಾವನ್ನು ಪಡೆಯಬಹುದು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ