janadhvani

Kannada Online News Paper

ಮಾರ್ಚ್ 1-15: ಎಸ್ಸೆಸ್ಸೆಫ್ ಮುಖವಾಣಿ ಇಶಾರ ಚಂದಾಭಿಯಾನ

ಎಸ್ಸೆಸ್ಸೆಫ್ ನ ಮುಖವಾಣಿ ಅರಿವಿನ ಹರಿವು ಇಶಾರ ಪಾಕ್ಷಿಕ ಅದ್ದೂರಿಯಾಗಿ 11ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೀಗ ಮಾರ್ಚ್ 1 ರಿಂದ 15ರ ತನಕ ಅದರ ಚಂದಾ ಅಭಿಯಾನ ನಡೆಯಲಿದೆ.

ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಮುಂತಾದ ಸರ್ವ ರಂಗಗಳಲ್ಲೂ ಬೆಳಕು ಚೆಲ್ಲುವ ಸುನ್ನೀ ಸಾಹಿತ್ಯ ಕರ್ನಾಟಕದ ಅತೀ ಹೆಚ್ಚು ಪ್ರಸಾರವಿರುವ ಪತ್ರಿಕೆ. ಹೊಸ ಚಂದಾದಾರರಾಗಲು ಸೂಕ್ತವಾದ ಸಮಯ ಇದಾಗಿದ್ದು ,ಎಲ್ಲರೂ ಚಂದಾ ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಇಶಾರ ಮ್ಯಾನೇಜರ್ ಹುಸೈನ್ ಸಅದಿ ಹೊಸ್ಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.