ಕಲ್ಲಡ್ಕ,ಡಿ.4: ದಾರುಲ್ ಅಶ್ -ಅರಿಯ ಸುರಿಬೈಲು ಇದರ ಶಿಲ್ಪಿ ಮರ್ಹೂಂ ಸುರಿಬೈಲ್ ಉಸ್ತಾದರ 19ನೇ ಆಂಡ್ ನೇರ್ಚೆಯು ಇಂದು ಸಮಾಪನೆಗೊಳ್ಳಲಿದ್ದು,ಖುರ್ರತ್ತುಸ್ಸಾದಾತ್ ಕೂರ ತಂಙಳ್ ನೇತೃತ್ವ ನೀಡಲಿದ್ದಾರೆ.
ಪ್ರಮುಖ ಉಲಮಾ, ಸಾದಾತ್ ಗಳು ಹಾಗೂ ಸಾಮಾಜಿಕ ಧುರೀಣರು ಭಾಗವಹಿಸುವ ಈ ಮಹಾ ಸಂಗಮದ ಯಶಸ್ವಿಗೆ ಕಲ್ಲಡ್ಕ ಸೆಕ್ಟರ್ ವ್ಯಾಪ್ತಿಯ ಎಲ್ಲಾ ಶಾಖಾ ಕಾರ್ಯಕರ್ತರು ಸಹಕರಿಸಬೇಕು ಎಂದು ಕಲ್ಲಡ್ಕ ಸೆಕ್ಟರ್ ಅಧ್ಯಕ್ಷ ಮಹಮ್ಮದ್ ಮಜೀದ್ ಕದ್ಕರ್ ಕರೆ ನೀಡಿದ್ದಾರೆ.







