ರಿಯಾದ್: ಸೌದಿ ಅರೇಬಿಯಾದಲ್ಲಿ ಇಖಾಮ ಕಾಲಾವಧಿ ಮುಕ್ತಾಯಗೊಂಡವರು ಹಾಗೂ ಹುರೂಬ್ ಆದವರಿಗೆ ದೇಶ ತೊರೆಯಲು ಭಾರತೀಯ ರಾಯಭಾರ ಕಚೇರಿ ಅಂತಿಮ ನಿರ್ಗಮನದ ಅವಕಾಶ ಕಲ್ಪಿಸುತ್ತಿದೆ.
ಹುರೂಬ್ (ಪರಾರಿಯಾಗಿದ್ದಾಗಿ ಪ್ರಾಯೋಜಕರಿಂದ ದೂರು ನೀಡಲ್ಪಟ್ಟವರು), ಮತ್ಲೂಬ್(ಪೋಲೀಸ್ ಪ್ರಕರಣ ಇರುವವರು),ವಿವಿಧ ಪ್ರಕರಣದಲ್ಲಿ ದಂಡ ವಿಧಿಸಲ್ಪಟ್ಟು ಸಂಕಷ್ಟಕ್ಕೀಡಾದವರು ಮುಂತಾದವರಿಗೆ ದೇಶ ತೊರೆಯಲು ಫೈನಲ್ ಎಕ್ಸಿಟ್ ನೀಡಲಾಗುತ್ತದೆ.
ಇದಕ್ಕಾಗಿ ನೋಂದಣಿಯನ್ನು ಭಾರತೀಯ ರಾಯಭಾರ ಕಚೇರಿ ಪ್ರಾರಂಭಿಸಿದೆ. ವಿಶೇಷ ಫಾರ್ಮ್ ಅನ್ನು ಭಾರತದ ರಾಯಭಾರ ಕಚೇರಿಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಬಹುದು.
ನೋಂದಣಿ ಲಿಂಕ್: https://www.eoiriyadh.gov.in/alert_detail/?alertid=45
ಅರ್ಜಿ ಭರ್ತಿ ಮಾಡುವ ಕ್ರಮ
1. ಹೆಸರು 2. ಹೆಸರು ಇಕಾಮಾ ಪ್ರಕಾರ ಅರೇಬಿಕ್ ಭಾಷೆಯಲ್ಲಿ ಸೇರಿಸಿ 3. ಸೌದಿಯ ಮೊಬೈಲ್ ಸಂಖ್ಯೆ 4. ವಾಟ್ಸಾಪ್ ಸಂಖ್ಯೆ 5. ಸ್ವದೇಶದ ಮೊಬೈಲ್ ಸಂಖ್ಯೆ 6. ಇಮೇಲ್ ಐಡಿ 7.ಸೌದಿಯಲ್ಲಿ ಕೆಲಸ ಮಾಡುವ ಪ್ರಾಂತ್ಯ 9. ಪಾಸ್ಪೋರ್ಟ್ ಸಂಖ್ಯೆ 9. ಪಾಸ್ಪೋರ್ಟ್ ಮುಕ್ತಾಯ ದಿನಾಂಕ 10. ಪಾಸ್ಪೋರ್ಟ್ನ ಪ್ರಸ್ತುತ ಸ್ಥಿತಿ (ಕಳೆದುಹೋಗಿದೆಯೋ, ಅವಧಿ ಮುಗಿದಿದೆ ಅಥವಾ ಇಲ್ಲ, ತುರ್ತು ಪ್ರಮಾಣಪತ್ರ ಅಥವಾ ಅದರ ಮುಕ್ತಾಯ ದಿನಾಂಕ) 11. ಪಾಸ್ಪೋರ್ಟ್ನ ಪ್ರತಿ. 12. ಇಕಾಮಾ ಅವಧಿ ಮುಗಿದ ದಿನಾಂಕ 13. ಇಕಾಮಾ ಅವರ ಪ್ರಸ್ತುತ ಸ್ಥಿತಿ (ಹುರುಬ್, ಮತ್ಲೂಬ್ ಮತ್ತು ವಿವಿಧ ದಂಡಗಳ ಹೆಸರುಗಳು ಯಾವ ವಿಭಾಗ) 14. ಇಕಾಮಾ ಅಥವಾ ವೀಸಾದ ಪ್ರತಿ 15. ವೀಸಾ ಮಾಹಿತಿಯನ್ನು ಸೇರಿಸಿ.
ಅಂತಿಮ ನಿರ್ಗಮನವನ್ನು ಪಡೆಯುವುದರೊಂದಿಗೆ ಸ್ವದೇಶಕ್ಕೆ ಪ್ರಯಾಣ ಸಾಧ್ಯವಾಗಲಿದೆ. ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಶೀಘ್ರವಾಗಿ ನೋಂದಣಿ ಮಾಡಬೇಕಿದೆ. ನೋಂದಾವಣೆಗೆ ಪರಿಣಿತರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸೌದಿ ದೂತಾವಾಸದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕೀಸಿ.
00966542126748, 00966-11-4884697















ಇನ್ನಷ್ಟು ಸುದ್ದಿಗಳು
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ