ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿಯ ಅಧೀನದಲ್ಲಿ ವಲಯ ಸಮಿತಿಗಳ ಸಹಕಾರದೊಂದಿಗೆ ಸುಮಾರು ನೂರ ಏಳು ಧರ್ಮಗುರುಗಳಿಗೆ ವಲಯ ನಾಯಕರ ಮುಖಾಂತರ ಗೌರವಧನ ವಿತರಿಸಲಾಯಿತು.


ತಾಲೂಕು ಅದ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿಯವರ ಅದ್ಯಕ್ಷತೆಯಲ್ಲಿ ನಡೆದ ಸರಳ ಸಭೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರದಾನ ಕಾರ್ಯದರ್ಶಿ ರಾಜ್ಯ ವಕ್ಫ್ ಸದಸ್ಯರೂ ಆದ ಮೌಲಾನ ಶಾಫಿ ಸಅದಿಯವರು ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ನಡಿಸಿಕೊಂಡು ಬರುತ್ತಿರುವ ಇಂತಹ ಸಾಂತ್ವನ ಚಟುವಟಿಕೆಗಳನ್ನು ಮುಕ್ತಕಂಠದಿಂದ ಪ್ರಶಂಸಿದ ಶಾಫಿ ಸಅದಿಯವರು ಪುತ್ತೂರು ತಾಲೂಕು ಸಮಿತಿಯು ಇತರ ಜಿಲ್ಲಾ ಸಮಿತಿಗಳಿಗೆ ಮಾದರಿಯೆಂದು ಕೊಂಡಾಡಿದರು.
ಸಮಿತಿಯ ಪ್ರದಾನ ಕಾರ್ಯದರ್ಶಿ ಬಿ.ಪಿ ಇಸ್ಮಾಯಿಲ್ ಹಾಜಿ ಬೈತಡ್ಕ ಸ್ವಾಗತಿಸಿದರು.ಉಪಾದ್ಯಕ್ಷರಾದ ಶಕೂರು ಹಾಜಿ,ಖಾಸಿಮ್ ಹಾಜಿ ಮಿತ್ತೂರು,ಇಂಜಿನಿಯರ್ ಫಾರೂಕು ಬುಳರೀಕಟ್ಟೆ,ಮಜ್ಮ ಹಸೈನಾರ್ ಹಾಜಿ, ಸಿ ಎಂ ಅಬೂಬಕರ್ ಹಾಗೂ ವಲಯ ನಾಯಕರು ಉಪಸ್ಥಿತಿರಿದ್ದರು.






