ದುಬೈ : ಎಲ್ಲಾ ವಿಧ ಭಯೋತ್ಪಾದನೆಗಳನ್ನು ಹಾಗೂ ಅಸಹಿಷ್ಣುತೆಯನ್ನು ಕಠಿಣವಾಗಿ ವಿರೋಧಿಸಿದ ಧರ್ಮವಾಗಿದೆ ಇಸ್ಲಾಮ್, ಶಾಂತಿ ಮತ್ತು ಸಮಾಧಾನವು ಇಸ್ಲಾಮಿನ ಮುದ್ರೆಯಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಭಯೋತ್ಪಾದನೆ ವಿರುದ್ಧ ಕಠಿಣ ನಿರ್ಣಯ ಕೈಗೊಳ್ಳವ ಸಲುವಾಗಿ ಯುಎಇ ಗ್ರಹ ಮಂತ್ರಿ ಹಾಗೂ ಉಪ ಪ್ರಧಾನಿ ಶೈಖ್ ಸೈಫ್ ಬಿನ್ ಝಾಯಿದ್ ಅವರ ಆಹ್ವಾನದ ಮೇರೆಗೆ ದುಬೈ ಪೊಲೀಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್. ದಾಹಿ ಖಲ್ಪಾನ್ ತಮೀಮ್ ಅವರ ನಿವಾಸದಲ್ಲಿ ನಡೆದ ಪ್ರಮುಖ ಗಣ್ಯರ ಸಮ್ಮಿಲನದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಯುಎಇ ಸರಕಾರದ ಮೇಲ್ದರ್ಜೆಯ ಅಧಿಕಾರಿಗಳು, ಪ್ರಮುಖ ನೇತಾರರು, ರಾಜ ಕುಟುಂಬದ ಪ್ರತಿನಿಧಿಗಳು ಹಾಗೂ ರಾಜತಾಂತ್ರಿಕರು ಭಾಗವಹಿಸಿದ ಕಾರ್ಯಕ್ರಮದಲ್ಲಿ,ಭಯೋತ್ಪಾದನೆ ವಿರುದ್ಧ ಇಸ್ಲಾಮಿನ ನಿಲುವು ಎಂಬ ವಿಷಯದ ಬಗ್ಗೆ ಭಾರತದ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮಾತಾಡಿದರು.
ಶಾಂತಿಯುತವಾದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಯುಎಇ ಸರಕಾರ ಕ್ರಮವನ್ನು ಗ್ರಾಂಡ್ ಮುಫ್ತಿಯವರು ಮುಕ್ತಕಂಠದಿಂದ ಶ್ಲಾಘಿಸಿದರು. ರಮಳಾನಿನ ಆಧ್ಯಾತ್ಮಿಕತೆಯನ್ನು ವಿಶ್ವಾಸಿಗಳಿಗೆ ಧನಾತ್ಮಕವಾಗಿ ತಲುಪಿಸಲು ಯುಎಇ ಸರಕಾರವು ಕೈಗೊಳ್ಳುತ್ತಿರುವ ಕ್ರಮಗಳು ಪ್ರಶಂಸನೀಯವಾಗಿದೆ ಎಂದು ಗ್ರಾಂಡ್ ಮುಫ್ತಿ ಹೇಳಿದರು.

ಇದೇ ವೇಳೆ ಇಂಡಿಯನ್ ಗ್ರಾಂಡ್ ಮುಫ್ತಿಯಾಗಿ ನೇಮಕಗೊಂಡ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ದುಬೈ ಪೊಲೀಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್. ದಾಹಿ ಖಲ್ಪಾನ್ ತಮೀಮ್ ಅವರು ಅಭಿನಂದಿಸಿದರು.
ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ