ಬೆಂಗಳೂರು.ಏ,8: ಕಳೆದ ಸೋಮವಾರ ಸಂಜೆ 6 ಘಂಟೆ ಸುಮಾರಿಗೆ ಬೆಂಗಳೂರು ಮೆಟ್ರೋ ಸ್ಟೇಷನ್ ನಲ್ಲಿ ತೀವ್ರ ಪರಿಶೀಲನೆಗೆ ಒಳಪಡಿಸಿದ ವ್ಯಕ್ತಿ ಶಂಕಿತ ಉಗ್ರನಲ್ಲ ಎಂದು ಬೆಂಗಳೂರು ಪಶ್ಚಿಮ ವಿಭಾಗ ಡಿ.ಸಿ.ಪಿ. ರವಿ.ಡಿ.ಚೆನ್ನಣ್ಣನವರ್ ಪತ್ರಿಕಾಗೊಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಿಂದ ತಾನೋರ್ವ ಉಗ್ರನೆಂಬ ನೆಲೆಯಲ್ಲಿ ದೃಶ್ಯಮಾಧ್ಯಮಗಳಲ್ಲಿ ಪ್ರಚಾರಪಡಿಸುತ್ತಿರುವ ವಿರುದ್ಧ ದೂರು ದಾಖಲಿಸಿದ,ಬೆಂಗಳೂರಿನಲ್ಲಿ ಕಳೆದ 30 ವರ್ಷದಿಂದ ಮೆಜೆಸ್ಟಿಕ್ ಸಬ್ ವೇ ನಲ್ಲಿ ವಾಚ್ ವ್ಯಾಪಾರ ನಡೆಸುತ್ತಿರುವ ರಿಯಾಝ್ ಅಹ್ಮದ್ “ತಾನು ಮೆಟ್ರೋ ಸ್ಟೇಷನ್ ನಲ್ಲಿ ಆಗಮಿಸಿದಾಗ ತನ್ನನ್ನು ವಿಭಿನ್ನವಾಗಿ ಪರಿಶೀಲನೆ ನಡೆಸಿ, ನನ್ನ ಟೋಪಿ ತೆಗೆದಾಗ ಇರಿಸುಮುರಿಸು ಉಂಟಾಗಿ ಹಿಂದೆ ಮುಂದೆ ನೋಡಿದ್ದೆ, ನಾನು ಅಲ್ಲಿಂದ ನಿರ್ಗಮಿಸಿದ ನಂತರ ಸಿಸಿಟಿವಿ ದೃಶ್ಯವನ್ನು ಬಿತ್ತರಿಸುತ್ತಾ ನನ್ನನ್ನು ಶಂಕಿತ ಉಗ್ರನೆಂದು ಆಪಾದಿಸಲಾಗಿದೆ” ಇದರಿಂದ ತೀರಾ ಮಾನಸಿಕವಾಗಿ ನೊಂದಿರುವೆನು, ನನ್ನನ್ನು ಉಗ್ರನೆಂದು ಪ್ರಚಾರಪಡಿಸುವ ವಿರುದ್ಧ ಕ್ರಮ ಕೈಗೊಳ್ಳುವಂತೆ ರಿಯಾಝ್ ದೂರಿನಲ್ಲಿ ದಾಖಲಿಸಿದ್ದಾಗಿ ಪೋಲಿಸರು ಹೇಳಿದರು.















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ