ದಮಾಂ: ದೇಶದ ವಾಣಿಜ್ಯ ಸಂಸ್ಥೆಗಳು ಮತ್ತಿತರ ಕಡೆ ಜಾರಿಗೆ ತರಲಾದ ಸ್ವದೇಶೀಕರಣದ ಬಗ್ಗೆ ಮತ್ತೊಮ್ಮೆ ವಿಮರ್ಶೆ ನಡೆಸಲಾಗುವುದು ಎಂದು ಕಾರ್ಮಿಕ, ಸಾಮಾಜಿಕ ಕ್ಷೇಮ ಖಾತೆಯ ಸಚಿವ ಇಂಜಿನಿಯರ್ ಅಹ್ಮದ್ ಸುಲೈಮಾನ್ ಅಲ್ ರಾಜಿಹ್ ವ್ಯಕ್ತಪಡಿಸಿದ್ದಾರೆ.
ಟೆಕ್ಸ್ಟೈಲ್, ಆಟೋಮೊಬೈಲ್, ವಾಹನ ಮಾರಾಟ, ಪಾತ್ರೆಗಳು, ಪೀಠೋಪಕರಣ, ಕಚೇರಿ, ಬೇಕರಿ ಉತ್ಪನ್ನಗಳು ಮತ್ತು ಮಿಠಾಯಿ ಅಂಗಡಿಗಳು ಸೇರಿದಂತೆ ಹನ್ನೆರಡು ವಲಯಗಳಲ್ಲಿ ಎಪ್ಪತ್ತು ಶೇಕಡಾ ಸ್ವದೇಶೀಕರಣವನ್ನು ಇತ್ತೀಚೆಗೆ ಜಾರಿಗೆ ತರಲಾಗಿತ್ತು.
ಆದರೆ ಪರಿಚಯಸ್ಥರಾದ ಮೂಲ ನಿವಾಸಿಗಳು ಲಭಿಸದ ಕಾರಣ ಅನೇಕ ಸಂಸ್ಥೆಗಳನ್ನು ಮುಚ್ಚಲಾಯಿತು. ಈ ಸಂದರ್ಭದಲ್ಲಿ ಹಲವಾರು ಸ್ಥಾಪನೆಗಳ ಮಾಲಿಕರು ದೇಶೀಕರಣದ ಪ್ರಮಾಣವನ್ನು ಮರುಪರಿಶೀಲನೆ ನಡೆಸುವಂತೆ ಸಚಿವರೊಂದಿಗೆ ಕೇಳಿಕೊಂಡಿದ್ದರು.
ಪ್ರಮಾನವನ್ನು ಐವತ್ತು ಶೇಕಡಾ ಆಗಿ ನಿಗದಿಪಡಿಸುವಿರಾ ಎಂಬ ಪ್ರಶ್ನೆಗೆ ತಾವು ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದವರು ಹೇಳಿದರು.
ಪ್ರತೀ ವಿಭಾಗದಲ್ಲಿ ಎಷ್ಟು ಕಡಿತಗೊಳಿಸಬೇಕು ಎಂಬುದನ್ನೂ ತೀರ್ಮಾನಿಸಲಾಗುವುದು. ಯಾವ ವಿಭಾಗ ಎಂಬುದನ್ನು ಈಗ ಹೇಳಲಾಗದು ಎಂದ ಸಚಿವರು, ಖಾಸಗಿ ವಲಯದ ಸ್ಥಾಪನೆಗಳ ಮಾಲಕರೊಂದಿಗೆ ಚರ್ಚಿಸಿದ ಬಳಿಕ ತೀರ್ಮಾನಕ್ಕೆ ಬರಲಾಗುವುದು ಎಂದರು.
ಮಾರಾಟ ವಲಯದಲ್ಲಿ ಶೇಕಡಾ ಎಪ್ಪತ್ತು ಶೇಕಡಾ ದೇಶೀಕರಣವನ್ನು ಜಾರಿಗೆ ತಂದ ಕಾರಣ ಭಾರತೀಯರು ಸಮೇತ ಅನೇಕರು ತಮ್ಮ ಕೆಲಸವನ್ನು ಕಳಕೊಂಡಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ