ದೇರಳಕಟ್ಟೆ: ಅಖಿಲ ಭಾರತ ಇಸ್ಲಾಮಿಕ್ ವಿಧ್ಯಾಬ್ಯಾಸ ಮಂಡಳಿ ಆಯೋಜಿಸಿದ ಮುಅಲ್ಲಿಂ ಸಬಲೀಕರಣ ಕಾರ್ಯಕ್ರಮ (MEP) ದ ಅಂಗವಾಗಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಕರ್ನಾಟಕ ರಾಜ್ಯದ ಆಯ್ದ ಹನ್ನೊಂದು ಟ್ರೈನರ್ಸ್ ಗಳು ಮತ್ತು ದೇರಳಕಟ್ಟೆ ರೇಂಜ್ ಮುಅಲ್ಲಿಮರಿಗೆ ನೀಡಲಾದ ಟ್ರೈನಿಂಗ್ ಮುಅಲ್ಲಿಮ್ ಎಂಪವರ್ ಮೆಂಟ್ ತರಬೇತಿ ಇಂದು ಸಮಾಪ್ತಿಗೊಂಡಿತು.
ಕೇಂದ್ರ ಸಮಿತಿಯ ಬಹು ನಿರೀಕ್ಷಿತ ಯೋಜನೆಯಲ್ಲೊಂದಾದ ನೂರು ತಾಸಿನ ತರಬೇತಿ ಕಾರ್ಯಕ್ರಮದ ಮೊದಲ ಹಂತದ ಐವತ್ತು ಗಂಟೆಯ ಈ ತರಬೇತಿಗೆ ಕೇಂದ್ರ ಸಮಿತಿ ಕಾರ್ಯದರ್ಶಿ ಸುಲೈಮಾನ್ ಸಖಾಫಿ ಕುಂಞಂಕುಳಂ, ಬಶೀರ್ ಮುಸ್ಲಿಯಾರ್ ಚೆರೂಪ, ಮುಹ್ಯುದ್ದೀನ್ ಸಖಾಫಿ, ಬಶೀರ್ ಮಿಸ್ಬಾಹಿ ಮುಂಡಾಂಬ್ರ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ನೇತೃತ್ವ ನೀಡಿದರು.
ಮೂರು ಹಂತಗಳಾಗಿ ನಡೆದ ಈ ಕ್ಯಾಂಪಿನ ಅತಿಥೇಯ ವಹಿಸಿದ ಎಸ್ ಜೆ ಎಂ ದೇರಳಕಟ್ಟೆ ರೇಂಜ್ ನ ಉರುಮಣೆ, ಅಡ್ಕರೆ ಪಡ್ಪು, ಬದ್ಯಾರ್ ಮೊದಲಾದ ಕಡೆಗಳಲ್ಲಿ ನಡೆಯಿತು.

ಇಂದು ಬದ್ಯಾರ್ ನಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಕಾರ್ಯಕ್ರಮದ ಪ್ರಮುಖ ರೂವಾರಿ ಎಸ್ ಜೆ ಎಂ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಉದ್ಘಾಟಿಸಿದರು. ಕ್ಯಾಂಪ್ ಅಮೀರ್ ಉರುಮಣೆ ಇಸ್ಮಾಯಿಲ್ ಸಅದಿ ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್ ಮೂಲಕ ರಾಜ್ಯ ಮಟ್ಟದ ಟ್ರೈನರ್ಸ್ ವಿಂಗ್ ಗೆ ಅಧಿಕೃತ ಚಾಲನೆ ನೀಡಲಾಯಿತು.
ಕೊನೆಯಲ್ಲಿ ನಾಯಕರನ್ನು ಕರ್ನಾಟಕ ಟ್ರೈನರ್ಸ್ ವಿಂಗ್ ಮತ್ತು ದೇರಳಕಟ್ಟೆ ರೇಂಜ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ