ದುಬೈ: ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖಸಿ) ರವರ ಪಾದಸ್ಪರ್ಶದಿಂದ ಪುಣೀತಗೊಂಡ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಅರವತ್ತೈದು ವರ್ಷಗಳ ಕಾಲ ಪ್ರಾಂಶುಪಾಲರಾಗಿಯೂ ಸಾವಿರಾರು ಜಮಾಅತಿನ ಖಾಝಿಯಾಗಿ ಸೇವೆಗೈದ ಆಧ್ಯಾತ್ಮಿಕ ಲೋಕದ ಮಹಾನ್ ನಾಯಕ ಸಾದಾತ್ ಕುಟುಂಬದ ಧ್ರುವ ತಾರೆ ವಿದ್ವಾಂಸ ಲೋಕದ ರಾಜಕುಮಾರ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ (ನ: ಮ) ರವರ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆಯು ಇತ್ತೀಚೆಗೆ ದುಬೈಯ ಹೋರ್ ಅಲ್ ಅಂಸ್ ತಂಙಳ್ ಮಸ್ಜಿದ್ ನಲ್ಲಿ ಮದನೀಸ್ ಯುಎಇ ಅಧ್ಯಕ್ಷರಾದ ಹಾಜಿ ಇಬ್ರಾಹಿಮುಲ್ ಮದನಿ ಸಾಮಣಿಗೆಯವರ ನೇತೃತ್ವದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಮದನೀಸ್ ಯುಎಇ ಸಂಚಾಲಕ ಹುಸೈನ್ ಮದನಿ ಕಕ್ಕೆಪದವು ವಹಿಸಿದ್ದು, ಚಪ್ಪಾರಪಡವು ಮುಹಮ್ಮದ್ ಮದನಿ,ಕಾಸಿಮ್ ಮದನಿ ತೆಕ್ಕಾರ್, ಜಲೀಲ್ ಮದನಿ ವಾಮಂಜೂರು, ಇಬ್ರಾಹಿಂ ಮದನಿ ಉಳ್ಳಾಲ, ಮುಹಮ್ಮದ್ ಮದನಿ ಈಶ್ವರಮಂಗಳ, ಹಮೀದ್ ಸಖಾಫಿ, ನಿಸಾದ್ ಬುಖಾರಿ, ಮುಹಮ್ಮದ್ ಸಖಾಫಿ, ಇನ್ನಿತರು ತಾಜುಲ್ ಉಲಮಾರ ಮಹಿಮೆಯನ್ನು ವಿವರಿಸಿ ಮಾತನಾಡಿದರು.


ವೇದಿಕೆಯಲ್ಲಿ ಮದನೀಸ್ ಯುಎಇ ಪ್ರತಿನಿಧಿಗಳ ಸಮೇತ ಅನೇಕ ಕೆಸಿಎಫ್ ,ಐಸಿಎಫ್ ಕಾರ್ಯಕರ್ತರು ಉಲಮಾ, ಉಮರಾ, ಸಾದಾತುಗಳು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಮದನೀಸ್ ಯುಎಇ ಕಾರ್ಯದರ್ಶಿ ಅಝೀಝ್ ಮದನಿ ಪರಪ್ಪು ಸ್ವಾಗತಿಸಿ ಕೋಶಾಧಿಕಾರಿ ಇಲ್ಯಾಸ್ ಮದನಿ ಕಾಶಿಪಟ್ಣ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ