ಮಂಗಳೂರು: ಕಳೆದ 12 ವರ್ಷಗಳಿಂದೀಚೆಗೆ ಕರ್ನಾಟಕದ ಸುನ್ನೀ ಸಂಘಟನೆಯ ದೊಡ್ಡ ಕನಸಾಗಿರುವ ಅಡ್ಯಾರ್ ಕಣ್ಣೂರು ಸುನ್ನೀ ಆಸ್ಥಾನ ಕೇಂದ್ರವು ಆರ್ಥಿಕ ಅಡಚಣೆಯಿಂದ ನಿರಂತರ ಮೊಟಕುಗೊಳ್ಳುತ್ತಿದ್ದ ಕಾಮಗಾರಿಯಿಂದ ಕನಸು ನನಸಾಗದೇ ಬಾಕಿ ಉಳಿದಿದೆ.
ಈ ಕೇಂದ್ರದ ನಿರ್ಮಾಣಕ್ಕಾಗಿ ಕೆ.ಸಿ.ಎಫ್, ಮುಸ್ಲಿಂ ಜಮಾಅತ್, ಎಸ್ ವೈ ಎಸ್ ,ಎಸ್ ಎಸ್ ಎಫ್ ,ಎಸ್ ಎಮ್ ಒ, ಎಸ್ ಜೆ ಎಮ್ ಕಾರ್ಯಕರ್ತರು ಸಾಕಷ್ಟು ತಮ್ಮ ಬೆವರು ಸುರಿಸಿದ್ದಾರೆ.
ಇಂದು ಆಸ್ಥಾನ ಕೇಂದ್ರಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ ಎಂ ಫಾರೂಕ್ ಹಾಗೂ ಮಾಜಿ ಶಾಸಕರಾದ ಮೊಯ್ದೀನ್ ಬಾವಾ ಹಾಗೂ ಶೌಕತ್ ಅಲಿ ಆಗಮಿಸಿ ಅಡ್ಯಾರ್ ಮರ್ಕಝ್ ಇಸ್ಲಾಮಿ ಕಟ್ಟಡವನ್ನು ಪರಿಶೀಲಿಸಿದರು.
ಸಹೋದರ ಮರ್ಹೂಂ ಮುಮ್ತಾಜ್ ಅಲಿಯನ್ನು ನೆನಪಿಸಿಕೊಂಡು ಭಾವುಕರಾದ ಬಿಎಂ ಫಾರೂಕ್ , ಮೊಟಕುಗೊಂಡಿರುವ ಕಾಮಗಾರಿಯ ಇನ್ನುಳಿದ 29ಸಾವಿರ ಚದರ ಅಡಿಗೆ ಬೇಕಾದ ಟೈಲ್ಸ್ , ಗ್ರಾನೈಟ್, ಎಕ್ಸ್ಟೀರಿಯಲ್ ಗ್ಲಾಸ್ ಎಲ್ಲವೂ ನೀಡುವ ಭರವಸೆ ನೀಡಿ , ಸ್ಥಳದಿಂದಲೇ ಬೇಕಾದವರನ್ನು ಸಂಪರ್ಕಿಸಿ ನಾಳೆಯಿಂದಲೇ ಕಾಮಗಾರಿ ಚಾಲನೆ ನೀಡಲು ಹೇಳಿದರು.
ಇನ್ನುಳಿದ ಕಾಮಗಾರಿಯನ್ನು ಬಿಎಂ ಫಾರೂಕ್ ಸಹೋದರರು ಪೂರ್ಣಗೊಳೀಸುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಸಹೋದರ ಮರ್ಹೂಂ ಮುಮ್ತಾಜ್ ಅಲಿಗಾಗಿ , ಮಗ್ಫಿರತ್ಗಾಗಿ ಎಲ್ಲರೂ ಪ್ರಾರ್ಥಿಸುವಂತೆ ಭಿನ್ನವಿಸಿಕೊಂಡಿದ್ದಾರೆ.
ವಕ್ಫ್ ಕೌನ್ಸಿಲ್ ಹಾಗೂ ಮುಸ್ಲಿಮ್ ಜಮಾಆತ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿಯವರ ವಿನಂತಿ ಮೇರೆಗೆ ಆಸ್ಥಾನ ಕೇಂದ್ರಕ್ಕೆ ಭೇಟಿ ನೀಡಿದ ಬಿ ಎಂ ಫಾರೂಕ್ ಜೊತೆಗೆ ಸಹೋದರರಾದ ಮಾಜಿ ಶಾಸಕ ಮೊಯ್ದೀನ್ ಬಾವಾ ,ಶೌಕತ್ ಅಲಿ ಹಾಜರಿದ್ದರು.
ಜೊತೆಗೆ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಹಾಗೂ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಬೆಂಗಳೂರು, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೋಂಟುಗೋಳಿ , ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸಅದಿ ಮಲ್ಲೂರು , ಕೆ ಸಿ ಎಫ್ ನಾಯಕರಾದ ಕಮರುದ್ದೀನ್ ಗೂಡಿನಬಳಿ, ಬಶೀರ್ ತಲಪಾಡಿ,ಅಬ್ದುಲ್ ಹಮೀದ್ ಅರೋಮ್ಯಾಕ್ಸ್ ಉಳ್ಳಾಲ, ರಫೀಕ್ ಸೂರಿಂಜೆ, ಅಶ್ರಫ್ ಕಿನಾರಾ, ಅಬ್ದುರ್ರಹ್ಮಾನ್ ಮೊಗರ್ಪನೆ ಉಪಸ್ಥಿತರಿದ್ದರು.

















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ